Home ಟಾಪ್ ಸುದ್ದಿಗಳು ಲಾರಿ ಹರಿದು ಬಾಲಕ ಮೃತ್ಯು: ಜನರಿಂದ ಕಲ್ಲು ತೂರಾಟ

ಲಾರಿ ಹರಿದು ಬಾಲಕ ಮೃತ್ಯು: ಜನರಿಂದ ಕಲ್ಲು ತೂರಾಟ

ಬೆಳಗಾವಿ: ಲಾರಿಯೊಂದು ಬಾಲಕನ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ನಡೆದಿದ್ದು, ಈ ಘಟನೆಯಿಂದ ರೊಚ್ಚಿಗೆದ್ದ ಜನ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಮೃತಪಟ್ಟ ಬಾಲಕನನ್ನು ಅರ್ಹಾನ್ ಬೇಪಾರಿ ಎಂದು ಗುರುತಿಸಲಾಗಿದೆ.

ಕಬ್ಬಿಣದ ರಾಡು ತುಂಬಿಕೊಂಡು ಹೋಗುತ್ತಿದ್ದ ಲಾರಿ, ರಸ್ತೆ ದಾಟುತ್ತಿದ್ದ ಅಕ್ಕ, ತಮ್ಮ ಹಾಗೂ ಇನ್ನೊಬ್ಬ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅರ್ಹಾನ್ ಅಕ್ಕ ಅತಿಕಾ ಹಾಗೂ ಪಾದಚಾರಿ ಆಯುಷ್ ಎಂಬ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

Join Whatsapp
Exit mobile version