ಜಕಾರ್ತದಿಂದ ಹಾರಾಟ ಮಾಡಿದ ವಿಮಾನ ನಾಪತ್ತೆ | ಅಪಾಯದಲ್ಲಿ 62 ಪ್ರಯಾಣಿಕರು

Prasthutha|

ಜಕಾರ್ತ : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ವಿಮಾನವೊಂದು ಇಂಡೋನೇಷ್ಯಾದ ವೈಮಾನಿಕ ಪ್ರಾಧಿಕಾರದ ಸಂಪರ್ಕದಿಂದ ಕಳೆದು ಹೋಗಿದೆ ಎಂದು ವರದಿಗಳು ತಿಳಿಸಿವೆ. ಸ್ರಿವಿಜಯ ಏರ್ ವಿಮಾನದಲ್ಲಿ 62 ಮಂದಿಯಿದ್ದು, ಅದು ಬೊರ್ನಿಯೊ ದ್ವೀಪದ ಪೊಂಟಿಯನಕ್ ಗೆ ಪ್ರಯಾಣಿಸುತಿತ್ತು.

- Advertisement -

56 ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನದಲ್ಲಿದ್ದರು. ಪ್ರಯಾಣಿಕರಲ್ಲಿ ಮೂರು ಶಿಶುಗಳು ಮತ್ತು ಏಳು ಮಕ್ಕಳಿದ್ದರು. ಇಬ್ಬರು ಪೈಲಟ್ ಗಳು ಮತ್ತು ನಾಲ್ವರು ವಿಮಾನ ಸಿಬ್ಬಂದಿಯಿದ್ದರು.

ವಿಮಾನ ಕೊನೆಯದಾಗಿ ಕಾಣಿಸಿಕೊಂಡ ಸಮುದ್ರದ ಪ್ರದೇಶಕ್ಕೆ ಹಡಗು ಕಳುಹಿಸಿಕೊಡಲಾಗಿದೆ ಎಂದು ಇಂಡೋನೇಷ್ಯಾ ಆಡಳಿತ ಮೂಲಗಳು ತಿಳಿಸಿವೆ.

Join Whatsapp