ಪ್ರೇಮಿಗಳಿಬ್ಬರ ಶವ ಪತ್ತೆ

Prasthutha|

ಆನೇಕಲ್: ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರು ಶವವಾಗಿ ಪತ್ತೆಯಾದ ಘಟನೆ ಆನೇಕಲ್ ನ ಹೆಬ್ಬಗೋಡಿಯಲ್ಲಿ ನಡೆದಿದೆ.

- Advertisement -


ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ನೇತ್ರಾವತಿ ಹಾಗೂ ಮಲ್ಲಿಕಾರ್ಜುನ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ನೇತ್ರಾವತಿ ಹಾಗೂ ಮಲ್ಲಿಕಾರ್ಜುನ್ ಕಾಲೇಜಿನಲ್ಲಿ ಓದುವಾಗಲೇ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಓದಿನ ಬಳಿಕ ನೇತ್ರಾವತಿ ಹೆಬ್ಬಗೋಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಇವರಿಬ್ಬರ ನಡುವೆ ಗಲಾಟೆ ಉಂಟಾಗಿತ್ತು ಎಂದು ತಿಳಿದು ಬಂದಿದೆ.


ಎರಡು ದಿನಗಳ ಹಿಂದೆ ಪ್ರೇಯಸಿಯ ಮನೆಗೆ ಮಲ್ಲಿಕಾರ್ಜುನ್ ಬಂದಿದ್ದಾನೆ ಎನ್ನಲಾಗಿದೆ. ನೇತ್ರಾವತಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕೆ ಆಕೆ ಮೃತಟ್ಟಿರುವ ಸಾಧ್ಯತೆ ಇದೆ. ನೇತ್ರಾವತಿ ಸಾವಿನಿಂದ ಭಯಗೊಂಡ ಮಲ್ಲಿಕಾರ್ಜುನ್ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Join Whatsapp