Home ಕರಾವಳಿ ಮಂಗಳೂರು | ಮೀನುಗಾರಿಕಾ ದೋಣಿ ದುರಂತ; 10 ಮಂದಿಯ ರಕ್ಷಣೆ

ಮಂಗಳೂರು | ಮೀನುಗಾರಿಕಾ ದೋಣಿ ದುರಂತ; 10 ಮಂದಿಯ ರಕ್ಷಣೆ

ಮಂಗಳೂರು : ಉಳ್ಳಾಲದಲ್ಲಿ ಮೀನುಗಾರಿಕಾ ದೋಣಿಯೊಂದು ಅಪಘಾತಕ್ಕೀಡಾಗಿದ್ದು, ದೋಣಿಯಲ್ಲಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ.

ಮೇ 23ರ ರವಿವಾರ ಮುಂಜಾನೆ ಇಲ್ಲಿನ ಕೋಡಿಯಲ್ಲಿ ಮೀನುಗಾರಿಕಾ ದೋಣಿ ಅಪಘಾತಕ್ಕೀಡಾಗಿದೆ.

ರವಿವಾರ ನಸುಕಿನ ವೇಳೆ ಸುಮಾರು 1.30ಕ್ಕೆ ಉಳ್ಳಾಲ ಮೂಲದ ಅಶ್ರಫ್‌‌ ಅವರಿಗೆ ಸೇರಿದ್ದ ಅಜಾನ್‌ ಎಂಬ ಮೀನುಗಾರಿಕಾ ದೋಣಿ ದಡದಿಂದ ಹೊರಟಿತ್ತು.

ಕನ್ಯಾಕುಮಾರಿಯ ಐವರು ಮೀನುಗಾರರು ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ದೋಣಿ ನಡೆಸಲು ಸಹೋದ್ಯೋಗಿಯೊಬ್ಬರಿಗೆ ಅವಕಾಶ ನೀಡಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ವೇಳೆ ಮೀನುಗಾರಿಕಾ ದೋಣಿ ಅಪಘಾತಕ್ಕೀಡಾಗಿದ್ದು, ಹತ್ತು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version