ಯೋಗಿ ಹೆಸರಿಗೆ ಕಪ್ಪು ಮಸಿ: 150 ಜನರ ವಿರುದ್ಧ ಎಫ್ ಐ ಆರ್

Prasthutha|

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಉದ್ಘಾಟಿಸಿದ ಪ್ರತಿಮೆಯೊಂದರ ಫಲಕದ ಮೇಲಿದ್ದ ಅವರ ಹೆಸರಿಗೆ ಕಪ್ಪು ಬಣ್ಣ ಬಳಿದಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸುಮಾರು 150 ಜನರ ವಿರುದ್ಧ ಎಫ್​.ಐ.ಆರ್​. ದಾಖಲಿಸಿದ್ದಾರೆ.

- Advertisement -

ದಾದ್ರಿಯ ಖಾಸಗಿ ಕಾಲೇಜೊಂದರಲ್ಲಿ 9ನೇ ಶತಮಾನದ ರಾಜ ಮಿಹಿರ್ ಭೋಜ್​ನ 15 ಅಡಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಯೋಗಿ ಆದಿತ್ಯನಾಥ್​ ಸೆ.22 ರಂದು ಅದರ ಉದ್ಘಾಟನೆ ಮಾಡಿದ್ದರು. ಆದರೆ, ಪ್ರತಿಮೆಯ ಕೆಳಗಿನ ಫಲಕದಲ್ಲಿ ರಾಜನ ಹೆಸರ ಮುಂಚೆ ‘ಗುರ್ಜಾರ್’​ ಎಂಬ ಶಬ್ದವನ್ನು ತೆಗೆಯಲಾಗಿತ್ತು. ಈ ಬಗ್ಗೆ ಗುರ್ಜಾರ್​ ಸಮುದಾಯದ ಜನರು ಆವೇಶಕ್ಕೊಳಗಾಗಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಮಹಾಪಂಚಾಯತ್​ ನಡೆಸಿದ್ದರು ಎನ್ನಲಾಗಿದೆ.

ಮಂಗಳವಾರದಂದು ಹಲವು ಜನ ಗುಂಪಾಗಿ ಬಂದು ಫಲಕದ ಮೇಲಿದ್ದ ಸಿಎಂ ಹೆಸರಿನ ಮೇಲೆ ಕಪ್ಪು ಪೇಂಟ್​ ಬಳಿದು ಹೋದರು ಎಂದು ತಿಳಿದು ಬಂದಿದೆ.

Join Whatsapp