ಪೊಲೀಸರನ್ನು ಬೂಟು ನೆಕ್ಕುವಂತೆ ಮಾಡುತ್ತೇವೆ : ಬಿಜೆಪಿ ಮುಖಂಡನ ಆಘಾತಕಾರಿ ಹೇಳಿಕೆ

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಪೊಲೀಸರನ್ನು ಬೂಟು ನೆಕ್ಕುವಂತೆ ಮಾಡುತ್ತೇವೆ ಎಂದು ಅಲ್ಲಿನ ಬಿಜೆಪಿ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಬೆದರಿಕೆಯೊಡ್ಡಿದ್ದಾರೆ.

- Advertisement -

ದುರ್ಗಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಈ ಆಘಾತಕಾರಿ ಹೇಳಿಕೆ ಅವರು ನೀಡಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ನೋಡಿ, ರಾಜ್ಯದಲ್ಲಿ ಗೂಂಡಾ ರಾಜ್ ಮುಂದುವರಿಯಲಿದೆಯೇ? ಪೊಲೀಸರು ಯಾವುದೇ ಸಹಾಯ ಮಾಡುತ್ತಿಲ್ಲ. ಅಂತಹ ಪೊಲೀಸ್ ಸಿಬ್ಬಂದಿಯನ್ನು ಏನು ಮಾಡುವುದು? ನಾವು ಅವರನ್ನು ಬೂಟು ನೆಕ್ಕುವಂತೆ ಮಾಡುತ್ತೇವೆ’’ ಎಂದು ರಾಜು ಬ್ಯಾನರ್ಜಿ ಹೇಳಿದ್ದಾರೆ.

Join Whatsapp