Home ಟಾಪ್ ಸುದ್ದಿಗಳು ನೆಹರು, ಇಂದಿರಾ , ರಾಜೀವ್ ಗಾಂಧಿ ನೆನಪುಗಳನ್ನು ಬಿಜೆಪಿ ಅಳಿಸಿ ಹಾಕಲು ಯತ್ನಿಸುತ್ತಿದೆ: ಶಿವಸೇನೆ

ನೆಹರು, ಇಂದಿರಾ , ರಾಜೀವ್ ಗಾಂಧಿ ನೆನಪುಗಳನ್ನು ಬಿಜೆಪಿ ಅಳಿಸಿ ಹಾಕಲು ಯತ್ನಿಸುತ್ತಿದೆ: ಶಿವಸೇನೆ

ಮುಂಬೈ: ಬಿಜೆಪಿಯು ಜವಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮುಂತಾದವರ ನೆನಪುಗಳನ್ನು ಅಳಿಸಿ ಹಾಕಲು ಯತ್ನಿಸುತ್ತಿದೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ. ಮುಖವಾಣಿ ಸಾಮ್ನಾದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಶಿವಸೇನೆ, ನೆಹರು–ಗಾಂಧಿ ವಂಶಾವಳಿಯ ಗೌರವವನ್ನು ನಾಶ ಮಾಡಲು ಬಿಜೆಪಿಯು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿರುವ ಶಿವಸೇನೆ, ಇದು ಅಧಿಕಾರದ ದುರಹಂಕಾರ ಎಂದು ಕಿಡಿಕಾರಿದೆ.

ಬಿಜೆಪಿಯು ರಾಹುಲ್‌ ಗಾಂಧಿಯನ್ನು ಪ್ರಶ್ನಿಸುವುದರ ಮೂಲಕ ಯಾವುದೇ ವ್ಯಕ್ತಿ, ಎಷ್ಟೇ ಶಕ್ತಿಶಾಲಿಯಾಗಿದ್ದರೂ ತಾನು ಯಾರ ಕೊರಳ ಪಟ್ಟಿಯನ್ನಾದರೂ ಹಿಡಿಯಬಹುದು ಎಂದು ತೋರಿಸುತ್ತಿದೆ ಎಂದು ಸಾಮ್ನಾ ಸಂಪಾದಕೀಯದಲ್ಲಿ ಹೇಳಿದೆ.

Join Whatsapp
Exit mobile version