Home ಟಾಪ್ ಸುದ್ದಿಗಳು ಸಂವಿಧಾನ ನಾಶಕ್ಕೆ ಬಿಜೆಪಿ-RSS ಯತ್ನ: ರಾಹುಲ್ ಗಾಂಧಿ

ಸಂವಿಧಾನ ನಾಶಕ್ಕೆ ಬಿಜೆಪಿ-RSS ಯತ್ನ: ರಾಹುಲ್ ಗಾಂಧಿ

ಚಂಡೀಗಢ: ‘ಸಂವಿಧಾನ ನಾಶಪಡಿಸಲು ಬಿಜೆಪಿ-RSS ಯತ್ನಿಸುತ್ತಿದೆ’ ಎಂದು ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.


ಹರಿಯಾಣದಲ್ಲಿ ಕಾಂಗ್ರೆಸ್ ಚುನಾವಣಾ ಸಮಾವೇಶದಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದು ಮಾತನಾಡಿದ ರಾಹುಲ್, ‘ಇದು ನಿಮ್ಮೆಲ್ಲರ ಸಂವಿಧಾನವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಸಂವಿಧಾನವಾಗಿದೆ. ಇದು ನಿಮ್ಮನ್ನು ರಕ್ಷಿಸುತ್ತದೆ’ ಎಂದು ಪುನರುಚ್ಚರಿಸಿದ್ದಾರೆ.


‘ಆದರೆ ಡಾ. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರ ಈ ಸಂವಿಧಾನವನ್ನು ನಾಶಪಡಿಸಲು ಬಿಜೆಪಿ ಹಾಗೂ RSS ಯತ್ನಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.


ಒಂದು ವೇಳೆ ಈ ಸಂವಿಧಾನ ನಾಶವಾದ್ದಲ್ಲಿ ದೇಶದ ಬಡ ಜನರ ಬಳಿ ಬೇರೆ ಏನೂ ಉಳಿಯುವುದಿಲ್ಲ. ಹಾಗಾಗಿ ಸಂವಿಧಾನವನ್ನು ಉಳಿಸಲು ಎಲ್ಲರೂ ಒಗ್ಗಟ್ಟಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.

Join Whatsapp
Exit mobile version