Home ಟಾಪ್ ಸುದ್ದಿಗಳು ಮುಳುಗುತ್ತಿರುವ ಬೆಂಗಳೂರು | ದೋಸೆ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ: ವ್ಯಾಪಕ ಆಕ್ರೋಶ

ಮುಳುಗುತ್ತಿರುವ ಬೆಂಗಳೂರು | ದೋಸೆ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ: ವ್ಯಾಪಕ ಆಕ್ರೋಶ

ಬೆಂಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ಬೆಂಗಳೂರು ಭಾಗಶಃ ಜಲಾವೃತಗೊಂಡಿದ್ದು ನಗರದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಸಂಸದ ತೇಜಸ್ವಿ ಸೂರ್ಯ, ಹೋಟೆಲ್ ಒಂದರ ದೋಸೆ ಪ್ರಚಾರದಲ್ಲಿ ತೊಡಗಿದ್ದಾರೆ. ಸಂಸದರ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಸಂಸದ ತೇಜಸ್ವಿ ಸೂರ್ಯ ಅವರ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ವ್ಯಾಪಕ ಮಳೆಯಾಗಿ ಜನರ ಪರದಾಡುತ್ತಿದ್ದಾರೆ. ಆದರೆ ಸೂರ್ಯ ಮಾತ್ರ ಸಾತ್ವಿಕ್ ಕಿಚನ್ ನ ದೋಸೆಯ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, “ಬೆಂಗಳೂರಿನಲ್ಲಿ ಮಳೆ ಪ್ರವಾಹ ಇದೆ, ಜನರಿಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಸುಳ್ಳು ಹೇಳುತ್ತಿರುವ ಟಿವಿ ಗಳಿಗೆ ಧಿಕ್ಕಾರವಿದೆ. ನೋಡಿ ಇಲ್ಲಿ ಅಲ್ಲಿನ ಎಂ ಪಿ ಈ ದಿನ ಬೆಳಿಗ್ಗೆ ಎಷ್ಟು ಆರಾಮ ದೋಸೆ ಪ್ರಚಾರ ಮಾಡ್ತಿದಾರೆ” ಎಂದು ಸಾಮಾಜಿಕ ಕಾರ್ಯಕರ್ತ ಎಂ. ಜಿ ಹೆಗಡೆ ವ್ಯಂಗ್ಯದ ಟ್ವೀಟ್ ಮಾಡಿದ್ದಾರೆ.
ಪ್ರಿಯಾ ಎಚ್ ಅವರು ಟ್ವೀಟ್ ಮಾಡಿ, “ಬೆಂಗಳೂರಿನ ಜನರು ನೀರಿನಲ್ಲಿ… ಚಿಂಟು ಮಾತ್ರ ಹೋಟೆಲ್ ಪ್ರಚಾರದಲ್ಲಿ..” ಎಂದು ಕುಟುಕಿದ್ದಾರೆ.


ಶರಣು ಎಂಬವರು ಟ್ವೀಟ್ ಮಾಡಿ, ಮೂರ್ಖ ಜನರು(ಮತದಾರರು) ಈ ಮೂರ್ಖನಿಗೆ ವೋಟ್ ಹಾಕಿ ಸಂಸದ ಮಾಡಿದರು, ಈಗ ಈ ಮೂರ್ಖ ಸಂಸದ ಆಗಿ ಯಾವುದೇ ಕೆಲಸ ಮಾಡುತ್ತಿಲ್ಲ ಇಂತಹ ಮೂರ್ಖ ಸಂಸದ ಆಗಲು ಜನರೇ ಕಾರಣ ಎಂದು ಹರಿಹಾಯ್ದಿದ್ದಾರೆ.

Join Whatsapp
Exit mobile version