ಸಿ.ಡಬ್ಲ್ಯೂ.ಸಿ ಸಭೆ ‘ ಪರಿವಾರ ಬಚಾವೋ ಕಾರ್ಯಕಾರಿಣಿ ಸಮಿತಿ’: ಬಿಜೆಪಿ ಲೇವಡಿ

Prasthutha|

ನವದೆಹಲಿ: ಇಂದು ನಡೆದಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ “ ಪರಿವಾರಿ ಬಚಾವೋ ಕಾರ್ಯಕಾರಿಣಿ ಸಮಿತಿ ಎಂದು ಬಿಜೆಪಿ ಲೇವಡಿ ಮಾಡಿದೆ.

- Advertisement -

ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟು ಮತ್ತು ನಾಯಕತ್ವದ ವೈಫಲ್ಯಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅದು ಆರೋಪಿಸಿದೆ.

ಮಾತ್ರವಲ್ಲ ಕಾಂಗ್ರೆಸ್ ಸುಳ್ಳನ್ನು ಹರಡುತ್ತಿದೆ ಎಂದು ಬಿಜೆಪಿ ಹೇಳಿದೆ

- Advertisement -

ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಸಿಡಬ್ಲ್ಯೂಸಿ ಸಭೆಯಲ್ಲಿ ಸಿಂಘು ಗಡಿಯಲ್ಲಿ ನಡೆದ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸದಿರುವುದು ದುರಂತ ಎಂದು ಬಣ್ಣಿಸಿದ್ದಾರೆ.

ವಿರೋಧ ಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕ್ಷುಲ್ಲಕ ಮತ್ತು ಅಗ್ಗದ ವೋಟ್ ಬ್ಯಾಂಕ್ ದೇಶದ ಪ್ರಮುಖ ವಿದ್ಯಮಾನಗಳ ಬಗ್ಗೆ ಮೌನವನ್ನು ಕಾಪಾಡುತ್ತಿರುವುದು ಅವರ ಅಧಃಪತಕ್ಕೆ ಹಿಡಿದ ಕೈಗನ್ನಡಿ ಎಂದು ಭಾಟಿಯಾ ಟೀಕಿಸಿದರು.

Join Whatsapp