ಬಿಜೆಪಿ ಶಾಸಕ ರೇಣುಕಾಚಾರ್ಯ ಗೆ ಅವಮಾನ; ಇದು ಬಿಜೆಪಿ ಗೆ ಕೇಡುಗಾಲ ಎಂದ ಕಾಂಗ್ರೆಸ್

Prasthutha|

ದಾವಣಗೆರೆ: ಶಾಲಾ ಕಾರ್ಯಕ್ರಮದಲ್ಲಿ ನಿಂತು ರಾಜಕೀಯ ಭಾಷಣ ಮಾಡಿದ ಬಿಜೆಪಿ ಶಾಸಕ ರೇಣುಕಾಚಾರ್ಯರನ್ನು ಜನ ವೇದಿಕೆಯಿಂದ ಇಳಿಸಿ ಓಡಿಸಿದ ಘಟನೆ ತಾಲೂಕಿನ ಚೀಲೂರು ಗ್ರಾಮದಲ್ಲಿ ನಡೆದಿದೆ.

- Advertisement -

ಹೊನ್ನಾಳಿ ಶಾಸಕ ರೇಣುಕಾಚಾರ್ಯರನ್ನು ಸರಕಾರಿ ಶಾಲಾ ವಾರ್ಷಿಕೋತ್ಸವಕ್ಕೆ ಆಹ್ವಾನಿಸಲಾಗಿತ್ತು. ಕಾರ್ಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ಮಾತನಾಡುವ ವೇಳೆ ರಾಜಕೀಯ ಬೆರೆಸಿದ್ದನ್ನು ಸಹಿಸದ ಜನರು ಆಕ್ರೋಶಗೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಶಾಲಾ ಕಾರ್ಯಕ್ರಮದಲ್ಲಿ ನಿಂತು ರಾಜಕೀಯ ಭಾಷಣ ಮಾಡಿದ ಬಿಜೆಪಿ ಶಾಸಕ ರೇಣುಕಾಚಾರ್ಯರನ್ನು ಜನ ವೇದಿಕೆಯಿಂದ ಇಳಿಸಿ ಓಡಿಸಿದ್ದಾರೆ. ಕೆಲವೇ ತಿಂಗಳಲ್ಲಿ ಜನತೆ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಇಳಿಸಿ ಓಡಿಸುವ ಮುನ್ಸೂಚನೆ ಇದು. ಬಿಜೆಪಿಯ ದುರಾಡಳಿತಕ್ಕೆ ಜನತೆ ಬೇಸತ್ತಿರುವುದಕ್ಕೆ ನಿದರ್ಶನಗಳಿವು ಎಂದು ಟೀಕಿಸಿದೆ.

Join Whatsapp