Home ಟಾಪ್ ಸುದ್ದಿಗಳು ಪರಶುರಾಮನ ನಕಲಿ ಪ್ರತಿಮೆ ಸೃಷ್ಟಿಸಿ ಬಿಜೆಪಿಗರು ಸನಾತನ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ: ಮಿಥುನ್ ರೈ

ಪರಶುರಾಮನ ನಕಲಿ ಪ್ರತಿಮೆ ಸೃಷ್ಟಿಸಿ ಬಿಜೆಪಿಗರು ಸನಾತನ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ: ಮಿಥುನ್ ರೈ

ಮಂಗಳೂರು: ಪರಶುರಾಮನ ನಕಲಿ ಪ್ರತಿಮೆ ಸೃಷ್ಟಿಸಿದ ಶಾಸಕ ಸುನಿಲ್ ಕುಮಾರ್ ರನ್ನು ಅಮಾನತು ಮಾಡಿ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದ್ದಾರೆ.


ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಕಳದ ಪರಶುರಾಮ ಥೀಂ ಪಾರ್ಕ್ನಲ್ಲಿ ‘ನಕಲಿ’ ಪರಶುರಾಮ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಶಾಸಕ ಸುನಿಲ್ ಕುಮಾರ್ ಮತ್ತು ಬಿಜೆಪಿಗರು ಸನಾತನ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ.


ಸರಕಾರಿ ಗೋಮಾಳದಲ್ಲಿ ಆಡಳಿತಾತ್ಮಕ ಅನುಮತಿ ಇಲ್ಲದೇ ಅನಧಿಕೃತವಾಗಿ ಥೀಂ ಪಾರ್ಕ್ ರಚಿಸಲಾಗಿದೆ. ಆದರೆ ಹಿಂದುತ್ವ, ಧರ್ಮ ಸಂರಕ್ಷಣೆಯ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಪರಶುರಾಮನ ಹೆಸರಿನಲ್ಲಿ ಇಷ್ಟೆಲ್ಲಾ ಅಕ್ರಮ ನಡೆದರೂ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು. ಈ ರೀತಿಯಾಗಿ ಸುಮ್ಮನೆ ಕುಳಿತರೆ ಬಿಜೆಪಿಗರಿಗೆ ಪರಶುರಾಮನ ಶಾಪ ತಟ್ಟಲಿದೆ. ಇದರ ಸತ್ಯಾಸತ್ಯತೆ ಹೊರಬರುವ ತನಕ ಹೋರಾಟ ನಡೆಸುತ್ತೇನೆ ಎಂದರು.

Join Whatsapp
Exit mobile version