Home ಟಾಪ್ ಸುದ್ದಿಗಳು ಎಲ್ಲಾ ಕ್ಷೇತ್ರಗಳಲ್ಲೂ ಮುಸ್ಲಿಮರನ್ನು ಸೋಲಿಸುವ ಗುರಿ ಸಾಧಿಸಿದ ಬಿಜೆಪಿ: ಆಕರ್ ಪಟೇಲ್

ಎಲ್ಲಾ ಕ್ಷೇತ್ರಗಳಲ್ಲೂ ಮುಸ್ಲಿಮರನ್ನು ಸೋಲಿಸುವ ಗುರಿ ಸಾಧಿಸಿದ ಬಿಜೆಪಿ: ಆಕರ್ ಪಟೇಲ್

ಬೆಂಗಳೂರು: ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಜನಸಂಘವು ಮುಸ್ಲಿಮರನ್ನು ಸೋಲಿಸುವ ತಮ್ಮ ಗುರಿಯನ್ನು ಸಾಧಿಸಿದೆ ಎಂದು ರಾಜಕೀಯ ವಿಶ್ಲೇಷಕ ಆಕರ್ ಪಟೇಲ್ ಹೇಳಿದ್ದಾರೆ.

ಶಿವಾಜಿನಗರದ ಸಾಲಾರ್ ಆಡಿಟೋರಿಯಮ್ ನಲ್ಲಿ ರವಿವಾರ(ಜ.15) ‘ಪರಸ್ಪರ ಬೆಂಗಳೂರು’ ಆಯೋಜಿಸಿದ್ದ, ‘ವೈವಿಧ್ಯಮಯ ಭಾರತಕ್ಕೆ ಸಾಮಾಜಿಕ ಆರ್ಥಿಕ ಸವಾಲುಗಳು ಮತ್ತು ಮುಂದಿನ ದಾರಿ’ ಕುರಿತ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದ ಅವರು, ರಾಜಕೀಯವಾಗಿ ಮುಸ್ಲಿಮ್ ಸಮುದಾಯವನ್ನು ಸೋಲಿಸಬೇಕು ಎಂದು ಜನಸಂಘದ ಮುಖ್ಯಸ್ಥ ಈ ಹಿಂದೆ ಕರೆ ನೀಡಿದ್ದ. ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬಿಜೆಪಿ ಮತ್ತು ಜನಸಂಘ ತಮ್ಮ ಗುರಿ ಸಾಧಿಸಿರುವುದನ್ನು ಕಾಣಬಹುದು. ಆದರೆ,ಇದೀಗ ರಾಜಕೀಯ ಮಾತ್ರವಲ್ಲದೆ, ಎಲ್ಲ ಕ್ಷೇತ್ರಗಳಲ್ಲಿಯೂ ಮುಸ್ಲಿಮರನ್ನು ದೂರ ಇರಿಸುವ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮ್, ಕ್ರೈಸ್ತ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿಕೊಂಡು ಗಲಭೆ ನಡೆಸುತ್ತಿರುವ ಸಂಘಪರಿವಾರದ ವಿರುದ್ಧ ಪ್ರತಿಯೊಬ್ಬರು ಹೋರಾಟ ನಡೆಸಬೇಕಾದ ಅಗತ್ಯ ಇದೆ ಎಂದು ಅವರು ಸಲಹೆ ನೀಡಿದರು.

ಕೇಂದ್ರ ಸರಕಾರದ ಆಡಳಿತ ವೈಫಲ್ಯ ಮತ್ತು ಜನವಿರೋಧಿ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಇದನ್ನೆಲ್ಲಾ ಮರೆಮಾಚಲು ಸರ್ಕಾರವು ಜನರ ಗಮನ ಬೇರೆಡೆ ಸೆಳೆಯುವಲ್ಲಿ ನಿರತವಾಗಿದೆ ಎಂದು ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version