ಬಿಜೆಪಿಯವರು ಕೆಡವುದರಲ್ಲಿ ನಿಸ್ಸೀಮರು: ದೇವಸ್ಥಾನ ಧ್ವಂಸಕ್ಕೆ ಯು.ಟಿ. ಖಾದರ್ ಕಿಡಿ

Prasthutha|

ಮಂಗಳೂರು: ಅಂದು ವಿದೇಶಿಯರು ದೇವಾಲಯ, ಮಸೀದಿ ಕೆಡವಿದರು, ಇದೀಗ ಬಿಜೆಪಿ ಈ ಕಾರ್ಯದಲ್ಲಿ ತೊಡಗಿದೆ. ಬಿಜೆಪಿ ಪಕ್ಷದ ಸಂಸ್ಕೃತಿಯೇ ಕೆಡುವುದು. ಇವರು ಕೆಡುವುದರಲ್ಲಿ ನಿಸ್ಸೀಮರು ಎಂದು ಶಾಸಕ ಯುಟಿ ಖಾದರ್ ಟೀಕಾಪ್ರಹಾರ ನಡೆಸಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಸಮಾಜ ಕೆಡುವುದರಲ್ಲಿ ಬಿಂಬಿತರಾಗಿರುವವರು. ಇದೀಗ ಧಾರ್ಮಿಕ ಕೇಂದ್ರ ಗಳನ್ನು ಕೆಡುವುದರಲ್ಲಿ ಮುಂದಾಗಿದ್ದಾರೆ. ಇವರು ಜನರ ಭಾವನೆ ಅರ್ಥ ಮಾಡಿಲ್ಲ,ಇತಿಹಾಸ ಇರುವ ಧಾರ್ಮಿಕ ಕೇಂದ್ರ ಕೆಡವುದು ಸರಿಯಲ್ಲ ಎಂದು ಹೇಳಿದರು.


ಸರ್ಕಾರ ಕೋರ್ಟ್ ಮತ್ತು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಿದೆ. ಜನರಿಗೆ ನೆಮ್ಮದಿ ಜೀವನಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ದೊಡ್ದ ಕಂಪೆನಿಗಳಿಗೆ ಸರ್ಕಾರಿ ಜಾಗ ಸಕ್ರಮ ಮಾಡಿ ಕೊಟ್ಟಿದೆ. ಆದರೆ ಯಾರಿಗೂ ತೊಂದರೆ ಆಗದ ಧಾರ್ಮಿಕ ಕೇಂದ್ರಗಳನ್ನು ಕೆಡವಲು ಮುಂದಾಗಿದೆ ಎಂದು ಖಾದರ್ ಆರೋಪಿಸಿದರು.

- Advertisement -


ದೇವಸ್ಥಾನ ಧ್ವಂಸಗೈದ ಘಟನೆಯ ನೈತಿಕ ಹೊಣೆ ಹೊತ್ತು ಮೈಸೂರಿನ ಉಸ್ತುವಾರಿ ಸಚಿವರು ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಆಡಳಿತ ಕೇಂದ್ರದಲ್ಲಿ ಯಾವುದೇ ಒಂದು ಧಾರ್ಮಿಕ ಕೇಂದ್ರ ಕೆಡವಿಲ್ಲ. ಬಿಜೆಪಿಯವರು ಕೂಸಿಗೆ ಚಿವುಟಿ ಇವರೇ ಉಯ್ಯಾಲೆ ಹಾಕಿ ಆಟ ಆಡಿಸುವ ನಾಟಕವಾಡುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳ ಜೊತೆ ಇವರು ಆಟ ಆಡುತ್ತಿದ್ದಾರೆ ಎಂದು ಖಾದರ್ ವ್ಯಂಗ್ಯವಾಡಿದರು.

Join Whatsapp