ಬಿಜೆಪಿಯಲ್ಲಿ ಮತ್ತೆ ಆರಂಭವಾಯಿತಾ ರೆಸಾರ್ಟ್ ರಾಜಕಾರಣ? | ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ಸಚಿವರುಗಳ ಮೀಟಿಂಗ್!

Prasthutha|

ಚಿಕ್ಕಮಗಳೂರು : ಸಿಎಂ ಯಡಿಯೂರಪ್ಪ ಸಚಿವ ಸಂಪುಟದ ಬೆನ್ನಲ್ಲೇ ಬಿಜೆಪಿ ಸಚಿವರು, ಶಾಸಕರೊಳಗೆ ಬುಗಿಲೆದ್ದಿರುವ ಅಸಮಾಧಾನ ಮತ್ತೊಮ್ಮೆ ರೆಸಾರ್ಟ್ ರಾಜಕೀಯ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ.

- Advertisement -

ಸಚಿವರುಗಳಾದ ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಚಿಕ್ಕಮಗಳೂರಿನಲ್ಲಿ ರೆಸಾರ್ಟ್ ವೊಂದರಲ್ಲಿ ಸಭೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಂಜೆ ವೇಳೆಗೆ ಇನ್ನೊಂದಷ್ಟು ಸಚಿವರು, ಶಾಸಕರು ಇಲ್ಲಿಗೆ ಆಗಮಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೂಡಿಗೆರೆ ಶಾಸಕರು ಎಂ.ಪಿ. ಕುಮಾರಸ್ವಾಮಿ ಅವರೂ ಸಚಿವರನ್ನು ರೆಸಾರ್ಟ್ ನಲ್ಲಿ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ನಿನ್ನೆಯಿಂದಲೂ ರೆಸಾರ್ಟ್ ನಲ್ಲಿ ರಾಜಕೀಯ ಚರ್ಚೆಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.

- Advertisement -

ಅಧಿಕಾರಿಗಳ ಸಭೆ ನಡೆಸಲು ರೆಸಾರ್ಟ್ ಗೆ ಬಂದಿರುವುದಾಗಿ ಸಚಿವರು ಹೇಳಿರುವುದು ಅನುಮಾನಗಳಿಗೆ ಕಾರಣವಾಗಿದೆ. ಆದರೆ, ರೆಸಾರ್ಟ್ ಗೆ ಆಗಮಿಸಿರುವುದಕ್ಕೂ, ಭಿನ್ನಮತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು, ಶಾಸಕರು ಸ್ಪಷ್ಟನೆ ನೀಡಿದ್ದಾರೆ.

ಬಳಿಕ ಸಚಿವರು ರೆಸಾರ್ಟ್ ನಿಂದ ತೆರಳಿದರು. ಪ್ರತಿಯೊಬ್ಬರೂ ಅರ್ಧ ಗಂಟೆ ಅಂತರದ ಮೂಲಕ ಒಬ್ಬೊಬ್ಬರಾಗಿ ತೆರಳಿದರು ಎಂದು ವರದಿಗಳು ತಿಳಿಸಿವೆ.   

Join Whatsapp