Home ಟಾಪ್ ಸುದ್ದಿಗಳು ಬಿಜೆಪಿಗರು ಮತ್ತು ನರೇಂದ್ರ ಮೋದಿ ಸುಳ್ಳಿನ ಕಾರ್ಖಾನೆ ಸೃಷ್ಟಿಸುತ್ತಿದ್ದಾರೆ: ಹಮೀದ್ ಮಾಸ್ಟರ್

ಬಿಜೆಪಿಗರು ಮತ್ತು ನರೇಂದ್ರ ಮೋದಿ ಸುಳ್ಳಿನ ಕಾರ್ಖಾನೆ ಸೃಷ್ಟಿಸುತ್ತಿದ್ದಾರೆ: ಹಮೀದ್ ಮಾಸ್ಟರ್

ಬಂಟ್ವಾಳ: ನರೇಂದ್ರ ಮೋದಿ ಮತ್ತು ಬಿಜೆಪಿಗರು ಅಲ್ಪಸಂಖ್ಯಾತ ವಿರೋಧಿ ನೀತಿಯನ್ನು ಅನುಸರಿಸುತ್ತಾ ಧರ್ಮ ಧರ್ಮಗಳ ನಡುವೆ ವಿದ್ವೇಷವನ್ನು ಉಂಟು ಮಾಡಿ ರಾಜಕೀಯ ಲಾಭವನ್ನು ಪಡೆಯಲು ಸುಳ್ಳಿನ ಫ್ಯಾಕ್ಟರಿಯನ್ನು ನಿರ್ಮಿಸುತ್ತಿದೆ. ಎಸ್ ಡಿ ಪಿ ಐ ಯು ಬಿಜೆಪಿಯ ಈ ನೀತಿಯ ವಿರುದ್ಧ ಕಳೆದ 15 ವರ್ಷಗಳಿಂದ ಹೋರಾಟವನ್ನು ಮಾಡುತ್ತಾ ಬಂದಿದೆ. ಮುಂದೆಯೂ ಕೂಡ ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ರಾಜಿ ರಹಿತವಾದ ಹೋರಾಟವನ್ನು ಮುಂದುವರಿಸಲಿದೆ ಎಂದು ಎಸ್ ಡಿ ಪಿ ಐ ರಾಷ್ಟ್ರೀಯ ಸಮಿತಿ ಸದಸ್ಯ ಹಮೀದ್ ಮಾಸ್ಟರ್ ಹೇಳಿದ್ದಾರೆ.

ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನಾಯಕರ ಶೃಂಗ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರಾಧ್ಯಕ್ಷ ಮುನಿಶ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಅತಿಥಿ ಭಾಷಣವನ್ನು ನೆರವೇರಿಸಿದರು.


ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್ ಸಮಾರೋಪ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಮೂಸಬ್ಬ ತುಂಬೆ ,ಅಬೂಬಕ್ಕರ್ ಮದ್ದ, ನಝೀರ್ ಫರಂಗಿಪೇಟೆ ಉಪಸ್ಥಿತರಿದ್ದರು. ಮುಬಾರಕ್ ಗೂಡಿನಬಳಿ ಧನ್ಯವಾದಗೈದರೆ, ಮಹಮೂದ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version