Home ಟಾಪ್ ಸುದ್ದಿಗಳು ಸಂವಿಧಾನ ಬುಡಮೇಲುಗೊಳಿಸುವುದು ಬಿಜೆಪಿ ಅಜೆಂಡಾ: ಬಿ.ಕೆ.ಹರಿಪ್ರಸಾದ್

ಸಂವಿಧಾನ ಬುಡಮೇಲುಗೊಳಿಸುವುದು ಬಿಜೆಪಿ ಅಜೆಂಡಾ: ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಬಿಜೆಪಿಯವರಷ್ಟು ಲುಚ್ಚಾಗಳು ಯಾರೂ ಇಲ್ಲ. ಸಂವಿಧಾನ ಬುಡಮೇಲು ಮಾಡುವುದು, ರಾಷ್ಟ್ರಧ್ವಜ ಬದಲಾಯಿಸುವುದು ಇವೆಲ್ಲ ಅವರ ಅಜೆಂಡಾವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಈಶ್ವರಪ್ಪ ಹರಕು ಬಾಯಿ ದಾಸ. ಇಂಥವರಿಗೆಲ್ಲ ಇಡೀ ದೇಶದಲ್ಲಿ ಈಶ್ವರಪ್ಪರಂಥ ಹರಕುಬಾಯಿ ದಾಸರೇ ಇದ್ದಾರೆ. ಹಾವಿನಪುರದವರು (ನಾಗಪುರ ಆರೆಸ್ಸೆಸ್ಸ್ ಕೇಂದ್ರ) ಸಾಕಿರುವುದೆಲ್ಲ ಇಂಥ ಹರಕು ಬಾಯಿಯವರನ್ನು. ಅದು ಬಚ್ಚಲು ಬಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಇದೆಲ್ಲ ಆರೆಸ್ಸೆಸ್ ಸಂಸ್ಕೃತಿ. ಹೀನವಾದ, ಹೇಯವಾದ ಸಂಸ್ಕೃತಿ. ಈಶ್ವರಪ್ಪ ಅವರ ಬೆನ್ನಿಗೆ ಮುಖ್ಯಮಂತ್ರಿ ನಿಂತಿರುವುದು ದುರಂತ’ ಎಂದೂ ಹೇಳಿದರು.

ನಾನು ಈ ಭಾರತ ದೇಶದ ನಾಗರಿಕ. ಸ್ವಾತಂತ್ರ್ಯ ಭಾರತದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಎಷ್ಟೆಷ್ಟೋ ಈಶ್ವರಪ್ಪರಂಥವರು ಹೋಗ್ಬಿಟ್ಟಿದ್ದಾರೆ. ಈಗ ಈಶ್ವರಪ್ಪ ಹೋಗೋದಿಲ್ವಾ` ಎಂದೂ ಪ್ರಶ್ನಿಸಿದರು.

Join Whatsapp
Exit mobile version