Home ಕರಾವಳಿ ಬಿಲ್ಲವರ ಪ್ರತಿಭಟನೆ| ವೇಣೂರು ದೇವಾಲಯದ ಕಾರ್ಯಕ್ರಮದಿಂದ ರೋಹಿತ್ ಚಕ್ರತೀರ್ಥ ಔಟ್

ಬಿಲ್ಲವರ ಪ್ರತಿಭಟನೆ| ವೇಣೂರು ದೇವಾಲಯದ ಕಾರ್ಯಕ್ರಮದಿಂದ ರೋಹಿತ್ ಚಕ್ರತೀರ್ಥ ಔಟ್

ಬೆಳ್ತಂಗಡಿ: ಬಿಲ್ಲವ ಸಮುದಾಯದ ಭಾರೀ ವಿರೋಧ ಹಿನ್ನೆಲೆಯಲ್ಲಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸುವ ವಿಚಾರ ಕೈಬಿಡಲಾಗಿದೆ.

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ವಿವಾದಿತ ವ್ಯಕ್ತಿ ರೋಹಿತ್ ಚಕ್ರತೀರ್ಥರನ್ನು ಶಾಸಕ ಹರೀಶ್ ಪೂಂಜಾ ಅಧ್ಯಕ್ಷರಾಗಿರುವ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಆಹ್ವಾನಿಸಿತ್ತು. ಆದರೆ ಈ ನಿರ್ಧಾರಕ್ಕೆ ವಿವಿಧ ಬಿಲ್ಲವ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ರೋಹಿತ್ ಕಾರ್ಯಕ್ರಮಕ್ಕೆ ಆಗಮಿಸಿದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು.

Join Whatsapp
Exit mobile version