ಸುಬ್ರಹ್ಮಣ್ಯ | ಬೈಕ್ ಮೇಲೆ ಜಿಗಿದ ಕಡವೆ: ಸವಾರನ ದಾರುಣ ಸಾವು

Prasthutha|

ಸುಬ್ರಹ್ಮಣ್ಯ: ಬೈಕ್ ನಲ್ಲಿ ಹೋಗುತ್ತಿದ್ದಾಗ ಹಠಾತ್ತಾಗಿ ಕಡವೆಯೊಂದು ಬೈಕ್ ಮೇಲೆ ಜಿಗಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದಾರುಣ ಸಾವಿಗೀಡಾಗಿ, ಸಹ ಸವಾರ ಸಣ್ಣ ಪುಟ್ಟ ಗಾಯಗೊಂಡ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ.
ಮೃತ ಸವಾರನನ್ನು ರಾಮಚಂದ್ರ ಅರ್ಬಿತ್ತಾಯ (50) ಎಂದು ಗುರುತಿಸಲಾಗಿದೆ.

- Advertisement -


ಶಟಲ್ ಆಟ ಆಡಿ ಮನೆಗೆ ಬೈಕ್ ನಲ್ಲಿ ಹಿಂದಿರುಗುತ್ತಿದ್ದ ಸಂದರ್ಭ ಕಾಡಿನೊಳಗಿಂದ ರಸ್ತೆ ದಾಟುತ್ತಿದ್ದ ಕಡವೆ , ಬೈಕ್ ಚಲಾಯಿಸುತ್ತಿದ್ದ ರಾಮಚಂದ್ರ ಮೇಲೆ ಜಿಗಿದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ಅವರ ತಲೆ ರಸ್ತೆಗೆ ಬಡಿದಿದೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Join Whatsapp