ವರದಿ ಪ್ರಸಾರ ತಡೆಗೆ ಲಂಚ ಕೇಳಿದ ಖಾಸಗಿ ವಾಹಿನಿ ಸಿಬ್ಬಂದಿ ಬಂಧನ

Prasthutha|

ಬೆಂಗಳೂರು: ವರದಿ ಪ್ರಸಾರ ತಡೆಗೆ ಲಂಚದ ಬೇಡಿಕೆ ಇಟ್ಟ ‘BTV’ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


‘BTV’ ಸುದ್ದಿ ವಾಹಿನಿಯ ಸಿಬ್ಬಂದಿ ತೀರ್ಥಪ್ರಸಾದ್‌, ಮಾನಹಾನಿಕರ ಸುದ್ದಿಯೊಂದನ್ನು ಬಿತ್ತರಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ₹20 ಲಕ್ಷ ಲಂಚ ಪಡೆದಿದ್ದು, ಆತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ದೊಡ್ಡಗುಬ್ಬಿ ಮುಖ್ಯ ರಸ್ತೆ ಬಳಿ ವಾಸವಿರುವ ಅನಿಲ್‌ಕುಮಾರ್‌ ಎಂಬುವರು ನೀಡಿರುವ ದೂರಿನ ಮೇಲೆ ಮುಖ್ಯ ಆರೋಪಿ ತೀರ್ಥ‌ಪ್ರಸಾದ್‌ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಕುಮಾರ್‌, ಶಿವಸ್ವಾಮಿ, ರಮೇಶ್‌ ಗೌಡ ಹಾಗೂ ಶ್ರೀಧರ್‌ ಎಂಬುವರನ್ನು ವಿಚಾರಣೆಗೆ ಒಳಪಡಿಸುವುದು ಬಾಕಿ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 384, 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಬಂಧಿತ ತೀರ್ಥಪ್ರಸಾದ್‌ ನಮ್ಮ ಸಿಬ್ಬಂದಿಯಲ್ಲ. ಕೆಲ ತಿಂಗಳುಗಳ ಹಿಂದೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ’ ಎಂದು BTV ಸುದ್ದಿವಾಹಿನಿಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

Join Whatsapp