Home ಟಾಪ್ ಸುದ್ದಿಗಳು ಬೆಂಗಳೂರು: ಕಾರಿಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ

ಬೆಂಗಳೂರು: ಕಾರಿಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ

ಬೆಂಗಳೂರು: ರವಿವಾರ ರಾಜ್ಯಕ್ಕೆ ಕರಾಳ ದಿನವಾಗಿದ್ದು, ಸರಣಿ ದುರಂತಗಳು ಸಂಭವಿಸಿವೆ. ಮಾದನಾಯಕನಹಳ್ಳಿ ಬಳಿ ಓಮ್ನಿ ಕಾರು ಅಪಘಾತವಾಗಿ ಕಾಣಿಸಿಕೊಂಡ ಬೆಂಕಿಯಲ್ಲಿ ಬಾಲಕಿಯೊಬ್ಬಳು ಸಜೀವ ದಹನವಾದ ದಾರುಣ ಘಟನೆ ನಡೆದಿದೆ.

ಅಪಘಾತಕ್ಕೀಡಾದ ಬಳಿಕ ಓಮ್ನಿ ಕಾರು ಬೆಂಕಿಗೆ ಆಹುತಿಯಾಗಿದ್ದು, ಕಾರಿನಲ್ಲಿದ್ದ ಬಾಲಕಿ ರಕ್ಷಣೆಗೆ ಮೊರೆಯಿಡುತ್ತಾ ಸಜೀವ ದಹನವಾಗಿದ್ದಾಳೆ.

14 ವರ್ಷದ ದಿವ್ಯಾ ಮೃತ ಬಾಲಕಿ. ಒಟ್ಟು 8 ಜನ ಕಾರಿನಲ್ಲಿದ್ದು, ಅಬ್ಬಿಗೆರೆಯಿಂದ ದಾಸನಪುರಕ್ಕೆ ವಾಪಾಸ್ ಆಗುತ್ತಿದ್ರು. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.

ಘಟನೆಯಲ್ಲಿ ಸುನಿತಾ (20), ಮಂಜುಳ (65), ಮಯಾಂಕ್ (16) ಮತ್ತು ನಮನ್ (17) ಎಂಬುವರು ಗಾಯಗೊಂಡಿದ್ದಾರೆ.

Join Whatsapp
Exit mobile version