ಬೆಳ್ತಂಗಡಿ: ದಲಿತ ವ್ಯಕ್ತಿಯ ಹತ್ಯೆ ಶಂಕೆ

Prasthutha|

ಬೆಳ್ತಂಗಡಿ: ದಲಿತ ಕೂಲಿ ಕಾರ್ಮಿಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿ ನಡೆದಿದೆ.

- Advertisement -


ಸ್ಥಳೀಯರಾದ ಶ್ರೀಧರ (30) ಹತ್ಯೆಗೀಡಾಗಿದ್ದು, ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ. ಆನಂದ ಗೌಡ, ಮಹೇಶ್ ಪೂಜಾರಿ ಆರೋಪಿಗಳು ಎನ್ನಲಾಗಿದೆ.


ಶಿಬಾಜೆ ಗ್ರಾಮದ ಗುತ್ತುಮನೆ ಎ.ಸಿ. ಕುರಿಯನ್ ಎಂಬವರ ಮಾಲಕತ್ವದ ತೋಟದಲ್ಲಿ ಶ್ರೀಧರ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಡಿ. 17ರಂದು ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ.ಆನಂದ ಗೌಡ ಹಾಗೂ ಮಹೇಶ್ ಎಂಬವರು ಸೇರಿ ಶ್ರೀಧರ ಅವರಿಗೆ ಹಲ್ಲೆ ಮಾಡಿದ್ದಾರೆ.

- Advertisement -


ಈ ವಿಚಾರ ತಿಳಿದು ತೋಟದ ಕೆಲಸಗಾರಾದ ಅಬ್ರಾಹಂ ಮತ್ತು ಪರಮೇಶ್ವರ ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ಈ ವೇಳೆ ಹಲ್ಲೆಗೊಳಗಾಗಿದ್ದ ಶ್ರೀಧರನನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಕೊಠಡಿಯಲ್ಲಿ ವಿಶ್ರಾಂತಿಗೆ ಕಳುಹಿಸಿದ್ದರು.


ಡಿ. 18ರಂದು ಶ್ರೀಧರನನ್ನು ಹುಡುಕಾಡಿದಾಗ ಕೊಠಡಿಯಿಂದ ಸ್ವಲ್ಪ ದೂರದಲ್ಲಿ ಅನುಮಾನಾಸ್ಪದವಾಗಿ ಬಿದ್ದುಕೊಂಡಿರುವುದು ಕಂಡುಬಂದಿದೆ.


ಆರೋಪಿಗಳು ತೋಟಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ಕತ್ತರಿಸಿ ಶ್ರೀಧರ್ ಅವರನ್ನು ಕೊಲೆ ಮಾಡಿ ತೋಟದ ಮಧ್ಯೆ ಹಾಕಿ ಹೋಗಿರುವುದಲ್ಲದೇ ಶ್ರೀಧರನ ಬಳಿಯಿದ್ದ 9500 ರೂ.ಗಳನ್ನು ದೋಚಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version