ಮಂಗಳೂರು: ಬೆಳ್ತಂಗಡಿ ಸಮೀಪದ ಮುರ ಎಂಬಲ್ಲಿನ ಮಸೀದಿಗೆ ದುಷ್ಕರ್ಮಿಗಳ ತಂಡವೊಂದು ಬಿಯರ್ ಬಾಟಲಿ ಎಸೆದು ದಾಂಧಲೆ ನಡೆಸಿ ಕೋಮುಗಲಭೆಗೆ ಸಂಚು ರೂಪಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ದುಷ್ಕರ್ಮಿಗಳ ಕುಕೃತ್ಯವು ಸ್ಥಳದಲ್ಲಿದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆಯಿಂದ ಮಸೀದಿ ಮತ್ತು ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ಭಾಗಶಃ ಹಾನಿಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.
![](https://prasthutha.com/wp-content/uploads/2022/02/7c860c7f-e976-457a-a8f1-bbaeed2cc5c4.jpg)
![](https://prasthutha.com/wp-content/uploads/2022/02/18ae2583-1c57-47b3-a7a1-2d5838167659.jpg)
![](https://prasthutha.com/wp-content/uploads/2022/02/683d77c4-ece9-43a5-b722-7ab3f4fd1ad7.jpg)
![](https://prasthutha.com/wp-content/uploads/2022/02/835f9558-98c2-4b5d-b9dd-20bc8451086c.jpg)
![](https://prasthutha.com/wp-content/uploads/2022/02/be88d3be-0bf7-4f93-8c8c-b2a2ccb7904a-576x1024.jpg)