ಬಿಡಿಎ ಅಧ್ಯಕ್ಷ, ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು: ವಿಡಿಯೋ ವೈರಲ್

Prasthutha|

ಬೆಂಗಳೂರು: ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ರೌಡಿ ಕುಳ್ಳ ದೇವರಾಜನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

- Advertisement -


ರೌಡಿಶೀಟರ್ ಕುಳ್ಳ ದೇವರಾಜ್ ಜೊತೆ ಸೇರಿ ಎಂ.ಎನ್ ಗೋಪಾಲಕೃಷ್ಣ, ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಗೋಪಾಲಕೃಷ್ಣ ಸಹಜವಾಗಿಯೇ ವಿಶ್ವನಾಥ್ ವಿರುದ್ಧ ಮಾತನಾಡಿದ್ದಾರೆ. ಆದರೆ ರೌಡಿಶೀಟರ್ ಕುಳ್ಳ ದೇವರಾಜ್ ಮಾತ್ರ ಬೇಕೆಂದೆ ಕಾರಣಕ್ಕೆ ವಿಶ್ವನಾಥ್ ವಿರುದ್ಧ ಗೋಪಾಲಕೃಷ್ಣ ಬಳಿ ಎತ್ತಿಕಟ್ಟಿದ್ದ ಎನ್ನಲಾಗಿದೆ.


ಇನ್ನು ತಾನು ವಿಶ್ವನಾಥ್ ಬೆಂಬಲಿಗ ಎಂದು ಹೇಳಿಕೊಂಡು ಓಡಾಡುತ್ತಿದ್ದ ಕುಳ್ಳ ದೇವರಾಜ್, ಸ್ಟಿಂಗ್ ಮಾಡಿದ್ದ ವಿಡಿಯೋವನ್ನು ಬಳಸಿಕೊಂಡು ಶಾಸಕ ವಿಶ್ವನಾಥ್ ಗೆ ಆಪ್ತನಾಗಲು ಬಯಸಿದ್ದ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ. ವಿಡಿಯೋ ವಿಚಾರ ಹೊರ ಬೀಳುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು ವಿಶ್ವನಾಥ್ ರನ್ನು ಸಂಪರ್ಕಿಸಿದ್ದಾರೆ. ವಿಶ್ವನಾಥ್ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸದ್ಯ ಗೋಪಾಲಕೃಷ್ಣರನ್ನು ಬಿಟ್ಟು ಕಳಿಸಿರುವ ಸಿಸಿಬಿ, ಕುಳ್ಳ ದೇವರಾಜನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Join Whatsapp