Home ಟಾಪ್ ಸುದ್ದಿಗಳು ಬಜ್ಪೆ: ಕರಾವಳಿ ಟೀಮ್ ನಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಜ್ಪೆ: ಕರಾವಳಿ ಟೀಮ್ ನಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಜ್ಪೆ: ಕರಾವಳಿ ಟೀಮ್ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಬಜ್ಪೆ ಜಂಕ್ಷನ್ ನಲ್ಲಿ ಮಂಗಳವಾರ ಆಚರಿಸಲಾಯಿತು.

ಧ್ವಜಾರೋಹಣವನ್ನು ಎಂ. ದೇವದಾಸ್ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ  ವಹಿಸಿದ್ದರು.

ಇದೇ ಸಂದರ್ಭ ಬಜ್ಪೆಯ ಪೌರ ಕಾರ್ಮಿಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಿರಾಜ್ ಬಜ್ಪೆ, ಶಿವರಾಂ ಪೂಜಾರಿ, ಬಿ. ಜೆ. ರಹೀಮ್, ರಾಕೇಶ್ ಕುಂದರ್, ಉಮೇಶ್ ಶೆಟ್ಟಿ, ಜೇಕಬ್ ಪಿರೇರಾ, ಅಶ್ರಫ್ ಮಾಚಾರ್, ಜಲಾಲುದ್ದೀನ್ ಮರವೂರು, ಮಂಜಪ್ಪ ಪುತ್ರನ್, ಹನೀಫ್ ಹಿಲ್ ಟಾಪ್, ನಝೀರ್  ಕಿನ್ನಿಪದವು, ಖಾದರ್ ಏರ್ಪೋರ್ಟ್, ಎಂ. ಕೆ. ಅಶ್ರಫ್, ಹಕೀಮ್ ಪ್ಯಾರಾ ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಹಫೀಝ್ ಕೊಳಂಬೆ ನಿರ್ವಹಿಸಿದರು.

Join Whatsapp
Exit mobile version