TRP ಹಗರಣ: ರಿಪಬ್ಲಿಕ್ ಟಿವಿಯ ಮೂವರು ಉದ್ಯೋಗಿಗಳಿಗೆ ಜಾಮೀನು

Prasthutha|

ಮುಂಬಯಿ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (TRP) ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಮೂವರು ಉದ್ಯೋಗಿಗಳಾದ ಶಿವೆಂಡು ಮುಲ್ಹರ್ಕರ್, ರಂಜಿತ್ ವಾಲ್ಟರ್ ಮತ್ತು ಶಿವಸುಬ್ರಮಣ್ಯಂ ಸುಂದರಂ ಗೆ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿದೆ.

- Advertisement -

ಖಾಸಗಿ ಸುದ್ದಿ ವಾಹಿನಿಯ ಈ ಮೂವರು ಉದ್ಯೊಗಿಗಳು ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಮನವಿಯನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಡಿ ಡಿಯೊ ಅವರು ಇಂದು (ಬುಧವಾರ) ಜಾಮೀನು ಮಂಜೂರು ಮಾಡಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಈ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ, ಹಿರಿಯ ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರೊಂದಿಗೆ ಮುಂಬೈ ಪೊಲೀಸರು ಮೂವರನ್ನು ಆರೋಪಿಗಳೆಂದು ಹೆಸರಿಸಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಕಲಿ TRP ಹಗರಣ ಬೆಳಕಿಗೆ ಬಂದಿತ್ತು.

Join Whatsapp