ಆಕ್ಸಿಜನ್ ಕೊರತೆ | ಮಂಗಳೂರಿಗೆ ಪ್ರಾಣವಾಯು ಹೊತ್ತು ತಂದ ಬಹ್ರೈನ್ ಹಡಗು

Prasthutha|

ಮಂಗಳೂರು : ದೇಶದಲ್ಲಿ ಕೊರೋನಾ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಸೋಂಕಿನಿಂದ ಜನತೆ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಉಂಟಾದ ಆಕ್ಸಿಜನ್ ಕೊರತೆಗೆ ಬಹರೈನ್ ದೇಶ ಸಹಾಯ ಹಸ್ತ ಚಾಚಿದೆ.

- Advertisement -

ಈ ಹಿನ್ನೆಲೆಯಲ್ಲಿ ಭಾರತ ಮತ್ತು ಬಹರೈನ್ ನಡುವಿನ ಒಪ್ಪಂದ ಪ್ರಕಾರ ಸಮುದ್ರ ಸೇತು ಯೋಜನೆಯಡಿ ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ ಐಎನ್ಎಸ್ ತಲಾವಾರು ಹಡಗಿನ‌ ಮೂಲಕ ಬಹರೈನ್ ನಿಂದ ಮಂಗಳೂರು ಎನ್ಎಂಪಿಟಿಗೆ 60 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ.

ಮೂವತ್ತು ಮೆಟ್ರಿಕ್ ಟನ್ ನ ಎರಡು ಟ್ಯಾಂಕರ್ ಹಡಗಿನ ಮೂಲಕ ಆಕ್ಸಿಜನ್ ಮಂಗಳೂರಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎಲ್ಲಾ ಹಡಗು ಮತ್ತು ಎನ್ಎಂಪಿಟಿ ಯಲ್ಲಿನ ಕಾರ್ಯಗಳು ಸ್ಥಗಿತಗೊಳಿಸಿ ಸರಕು ನಿರ್ವಹಣೆಯ ಕ್ರೈನ್ ಗಳ ಮೂಲಕ ಆಕ್ಸಿಜನ್ ಟ್ಯಾಂಕರ್ ಇಳಿಸಲಾಗಿದೆ.

Join Whatsapp