Home ಟಾಪ್ ಸುದ್ದಿಗಳು ಬಾಗಲಕೋಟೆ: ಮುಸ್ಲಿಂ ಧರ್ಮಪಂಡಿತಗೆ ಹಲ್ಲೆ, ಉದ್ವಿಗ್ನ ವಾತಾವರಣ

ಬಾಗಲಕೋಟೆ: ಮುಸ್ಲಿಂ ಧರ್ಮಪಂಡಿತಗೆ ಹಲ್ಲೆ, ಉದ್ವಿಗ್ನ ವಾತಾವರಣ

ಬಾಗಲಕೋಟೆ: ಅಂಗಡಿ ಮುಚ್ಚುವ ವಿಷಯಕ್ಕೆ ನಡೆದ ಸಣ್ಣ‌ ಜಗಳ ವಿಕೋಪಕ್ಕೆ ಹೋಗಿ ಮುಸ್ಲಿಂ ಧರ್ಮ ಪಂಡಿತ ಓರ್ವರ ಮೇಲೆ‌ ಮೂವರು ಹಲ್ಲೆ ನಡೆಸಿದ ಘಟನೆ ನವನಗರದ ಸೆಕ್ಟರ್ ನಂ.4ರ‌ ತರಕಾರಿ ಮಾರುಕಟ್ಟೆಯಲ್ಲಿ ರಾತ್ರಿ ನಡೆದಿದೆ. ಈ ಘಟನೆಯಿಂದ‌ ನವನಗರ‌ ಪೊಲೀಸ್ ಠಾಣೆ ಎದುರು‌ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಾರ್ತಿಕ್, ಪ್ರೀತಮ್, ನಾಗರಾಜ ಹಲ್ಲೆ ನಡೆಸಿದ ಆರೋಪಿಗಳು. ರವಿವಾರ ಬೆಳಗ್ಗೆ ನಡೆದ ಜಗಳದ‌ ಹಿನ್ನೆಲೆ‌ಯಲ್ಲಿ ಧರ್ಮ ಪಂಡಿತರ ಮೇಲೆ ಕಾರ್ತಿಕ್, ಪ್ರೀತಮ್, ನಾಗರಾಜ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ,‌ ಮುಸ್ಲಿಂ ಸಮುದಾಯದ ಪ್ರಮುಖರು, ರಾತ್ರಿ ನವನಗರ‌ ಪೊಲೀಸ್ ಠಾಣೆ ಎದುರು ಜಮಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಮುಸ್ಲಿಂ‌ ಮುಖಂಡರನ್ನು ಸಮಾಧಾನ ಪಡಿಸಿದ ಪೊಲೀಸರು ಆರೋಪಿಗಳಾದ ಕಾರ್ತಿಕ್, ಪ್ರೀತಮ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಗರಾಜ ಎಂಬಾತ ಓಡಿ ಹೋಗಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version