Home ಟಾಪ್ ಸುದ್ದಿಗಳು ದೇವಸ್ಥಾನದಲ್ಲಿ ಮಹಿಳೆಯ ಸಾಮೂಹಿಕ ಅತ್ಯಾಚಾರ, ಕೊಲೆ | ಪ್ರಮುಖ ಆರೋಪಿ ಅರ್ಚಕನ ಬಂಧನ

ದೇವಸ್ಥಾನದಲ್ಲಿ ಮಹಿಳೆಯ ಸಾಮೂಹಿಕ ಅತ್ಯಾಚಾರ, ಕೊಲೆ | ಪ್ರಮುಖ ಆರೋಪಿ ಅರ್ಚಕನ ಬಂಧನ

ಲಖನೌ : ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಭೀಕರ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿ ಅರ್ಚಕನೊಬ್ಬನನ್ನು ಬಂಧಿಸಲಾಗಿದೆ. ಮಹಿಳೆಯ ಮೇಲೆ ದೇವಸ್ಥಾನದಲ್ಲೇ ಅತ್ಯಾಚಾರ ನಡೆದಿತ್ತು ಎನ್ನಲಾಗಿದೆ.

ಘಟನೆ ನಡೆದ ನಾಲ್ಕು ದಿನಗಳ ಬಳಿಕ ಪ್ರಮುಖ ಆರೋಪಿ ದೇವಸ್ಥಾನದ ಅರ್ಚಕ ಸತ್ಯಾನಂದ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪಕ್ಕದ ಗ್ರಾಮದಲ್ಲಿ ಭಕ್ತರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ಆತನನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಅರ್ಚಕ ಮತ್ತು ಆತನ ಇಬ್ಬರು ಸಹಚರರು ಭಾನುವಾರ ರಾತ್ರಿ ಮಹಿಳೆಯನ್ನು ಆಕೆಯ ಮನೆಯ ಸಮೀಪ ಬಿಟ್ಟು ಹೋಗಿದ್ದರು. ಆದರೆ, ಅತಿಯಾದ ರಕ್ತಸ್ರಾವದಿಂದಾಗಿ ಮಹಿಳೆ ಮೃತಪಟ್ಟಿದ್ದರು. ಮಹಿಳೆಯ ಪಕ್ಕೆಲುಬು, ಕಾಲು ಮುರಿಯಲಾಗಿತ್ತು, ಖಾಸಗಿ ಭಾಗಕ್ಕೆ ತೀವ್ರ ಹಾನಿ ಮಾಡಲಾಗಿತ್ತು, ಶ್ವಾಸಕೋಶದ ಮೇಲೆ ಭಾರವಾದ ವಸ್ತುವಿನಿಂದ ದಾಳಿ ಮಾಡಲಾಗಿತ್ತು ಎಂದು ವರದಿಗಳಾಗಿದ್ದವು. ಇನ್ನಿಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿತ್ತು.  

Join Whatsapp
Exit mobile version