ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪ್ರಥ್ವಿರಾಜ್ ಫುಲ್ ಟ್ರೋಲ್ : ಹಿಂಗೂ ಕಟ್ಟಿ ಹಾಕ್ತಾರಾ ಎಂದ ಟ್ರೋಲಿಗರು

Prasthutha|

ನವದೆಹಲಿ : ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪ್ರಥ್ವಿರಾಜ್ ಚಿತ್ರ ಹಲವು ಕಾರಣಗಳಿಂದ ವೀಕ್ಷಕರಿಂದ ಟ್ರೋಲ್ ಆಗುತ್ತಿದೆ.

- Advertisement -

ಸಾಮ್ರಾಟ್ ಪ್ರಥ್ವಿರಾಜ್ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾದ ಸಿನೆಮಾ. ಮಾತ್ರವಲ್ಲ ಯುಪಿ ಮುಖ್ಯಮಂತ್ರಿ ಈ ಚಿತ್ರಕ್ಕೆ ತಮ್ಮ‌ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಕೂಡಾ ಘೋಷಣೆ ಮಾಡಿದ್ದರು. ಈಗ ಈ ಬಹು ನಿರೀಕ್ಷಿತ ಚಿತ್ರವೊಂದು ಸಂಪೂರ್ಣವಾಗಿ ಟ್ರೋಲಿಗರ ಪಾಲಾಗಿದೆ.

ಅಕ್ಷಯ್ ಅನ್ನು ಕಟ್ಟಿಹಾಕಿರುವ ಪೋಸ್ಟರ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಚ್ಚುಕಟ್ಟಾಗಿ ಸಿನಿಮಾ ಮಾಡುತ್ತೇವೆ ಎಂದು ಕೊಚ್ಚಿಕೊಳ್ಳುವ ನಟ ಈ ತರಃ ಸಿಲ್ಲಿ ಮಿಸ್ಟೇಕ್ ಮಾಡಿದ್ಯಾಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆ ಪೋಸ್ಟ್ ಅಲ್ಲಿ ಅಕ್ಷಯ್ ಅನ್ನು‌ ಕಟ್ಟಿಹಾಕಿದ ದೃಶ್ಯದಲ್ಲಿ ಅವರ ಕೈ ನೇತುಬಿದ್ದದ್ದು ಅಪಹಾಸ್ಯಕ್ಕೀಡಾಗಿದೆ. ಈ ಪೋಸ್ಟ್ ಗೆ ಬಗೆಬಗೆಯ ಕಮೆಂಟು ಹಾಕುತ್ತಿದ್ದು 54 ವರ್ಷದ ಅಕ್ಷಯ್ 25 ವರ್ಷದ ಮಾನುಷಿ ಚಿಲ್ಲರ್ ಜೊತೆಗಿನ ಜೋಡಿಯೇ ಸರಿಯಿಲ್ಲ ಎಂದೆಲ್ಲಾ ಟೀಕಿಸಿದ್ದಾರೆ.

- Advertisement -

ಅದಿತ್ಯನಾಥ್, ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೂ ಇದೀಗ ಸಾಮಾಜಿಕ ವಲಯದಾದ್ಯಂತ ತೀವ್ರ ಟೀಕೆಗೆ ಗುರಿಯಾಗುತ್ತಿದೆ.

Join Whatsapp