Home ಟಾಪ್ ಸುದ್ದಿಗಳು ನರಗುಂದ ಪೊಲೀಸ್ ಅಧಿಕಾರಿಗೆ ಸಂಘಪರಿವಾರದ ನಾಯಕನಿಂದ ಠಾಣೆ ಎದುರೇ ಆವಾಝ್: ವೀಡಿಯೋ ವೈರಲ್

ನರಗುಂದ ಪೊಲೀಸ್ ಅಧಿಕಾರಿಗೆ ಸಂಘಪರಿವಾರದ ನಾಯಕನಿಂದ ಠಾಣೆ ಎದುರೇ ಆವಾಝ್: ವೀಡಿಯೋ ವೈರಲ್

ನರಗುಂದ: ಬಜರಂಗದಳದ ಮುಖಂಡನೊಬ್ಬ ನರಗುಂದ ಪೊಲೀಸ್ ಠಾಣೆಯ ಎದುರೇ ಪೊಲೀಸ್ ಇನ್ಸ್ ಪೆಕ್ಟರ್ ಗೆ ಅವಹೇಳನಕಾರಿ ಪದ ಬಳಸಿ ದ್ವೇಷ ಭಾಷಣ ಮಾಡಿದ ಘಟನೆ ಸೋಮವಾರ ನಡೆದಿದೆ.

ಎರಡು ತಂಡಗಳ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ನರಗುಂದ ಪೊಲೀಸರು ಉಭಯ ಕಡೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದನ್ನೇ ನೆಪವಾಗಿಟ್ಟುಕೊಂಡ ಸಂಘಪರಿವಾರದ ಕಾರ್ಯಕರ್ತರು ಸೋಮವಾರ ನರಗುಂದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಭಜರಂಗದಳದ ಮುಖಂಡ ಸಂಜು ನಲವಡಿ ಎಂಬಾತ ಪೊಲೀಸರ ವಿರುದ್ಧ ಬಾಯಿಗೆ ಬಂದಂತೆ ಬೈದು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎನ್ನಲಾಗಿದೆ.

ಕೇಸ್ ತಗೊಳೋ ಸಿಪಿಐ.. ನೆನಪಿಳ್ಕೊಳ್ಳಿ ಎಲ್ಲರ ಮೇಲೂ ಕೇಸ್ ತಗೊಳ್ಬೇಕು. ಆಗುವುದಿಲ್ಲ ಅಂತಾ ಹೇಳುವ ಹಾಗಿಲ್ಲ ಎಂದು ಸಂಜು ನಲವಡಿ ಎಂಬಾತ ನರಗುಂದ ಪೊಲೀಸ್ ಠಾಣೆಯಲ್ಲೇ ದ್ವೇಷದ ಭಾಷಣ ಮಾಡಿದ್ದು, ಅದರ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಈತನ ಭಾಷಣದ ವೇಳೆ ಅಲ್ಲೇ ನೆರೆದಿದ್ದ ಇನ್ನೊಬ್ಬ ಭಜರಂಗದಳ ಕಾರ್ಯಕರ್ತ `ಏ ಹೊರಗೆ ಬಾ.. ಹೊರಗೆ’ ಎಂದು ಪೊಲೀಸರಿಗೆ ಆವಾಝ್ ಹಾಕಿದ್ದರೂ ಪೊಲೀಸರು ಮೌನಕ್ಕೆ ಶರಣಾಗಿದ್ದರು.

ಪೊಲೀಸ್ ಠಾಣೆಯ ಎದುರೇ ಮಹಿಳೆಯೊಬ್ಬರು ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಕೂಡ ವೀಡಿಯೋದಲ್ಲಿದೆ.

ಇಂತಹ ದ್ವೇಷದ ಭಾಷಣದಿಂದ ಉದ್ರಿಕ್ತರಾದ ಯುವಕರ ಗುಂಪೊಂದು ಸೋಮವಾರ ರಾತ್ರಿ ಮುಸ್ಲಿಮ್ ಯುವಕನೊಬ್ಬನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿತ್ತು. ಘಟನೆಯಲ್ಲಿ ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿತ್ತು.

Join Whatsapp
Exit mobile version