Home ಟಾಪ್ ಸುದ್ದಿಗಳು ಔರಂಗಬಾದ್, ಉಸ್ಮಾನಾಬಾದ್ ನಗರಗಳ ಹೆಸರು ಬದಲಾವಣೆ

ಔರಂಗಬಾದ್, ಉಸ್ಮಾನಾಬಾದ್ ನಗರಗಳ ಹೆಸರು ಬದಲಾವಣೆ

ಮುಂಬೈ: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ಔರಂಗಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರುಗಳನ್ನು ವಿವಾದಾತ್ಮಕವಾಗಿ ಬದಲಾಯಿಸಿ ಕೇಂದ್ರ ಸರಕಾರವು ಆದೇಶ ಹೊರಟಿಸಿದೆ.


ಕೇಂದ್ರ ಸರಕಾರದ ಸುತ್ತೋಲೆಯಂತೆ ಇನ್ನು ಮುಂದೆ ಔರಂಗಬಾದ್ ಹೆಸರು ಸಂಭಾಜಿ ನಗರ್ ಎಂದು ಬದಲಾಗಿದೆ. ಹಾಗೆಯೇ ಉಸ್ಮಾನಾಬಾದ್ ಹೆಸರನ್ನು ದಾರಾಶಿವ್ ಎಂದು ಬದಲಾಯಿಸಲಾಗಿದೆ.
2022ರ ಅಕ್ಟೋಬರ್ 20ರಂದು ಮಹಾರಾಷ್ಟ್ರ ಸರಕಾರವು ಸಂಪುಟ ತೀರ್ಮಾನದಂತೆ ಕೇಂದ್ರಕ್ಕೆ ಬರೆದ ಪತ್ರದಂತೆ ಈ ಹೆಸರು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.


ಉಸ್ಮಾನಾಬಾದ್ ನಗರದಲ್ಲಿ ನಾನಾ ಗುಹೆಗಳು ಇರುವುದರಿಂದ ಅದನ್ನು ದಾರಾಶಿವ್ ಎಂದು ಹೆಸರಿಸಲಾಗಿದೆ. ಸಂಭಾಜಿ ನಗರ್ ಹೆಸರು ಛತ್ರಪತಿ ಶಿವಾಜಿ ಮಹಾರಾಜ್’ರ ಮಗ ಛತ್ರಪತಿ ಸಂಭಾಜಿ ಮಹಾರಾಜ್ ಎನ್ನುವುದರ ಮೇಲೆ ಇಡಲಾಗಿದೆ. ಸಂಭಾಜಿ ಈ ಪ್ರದೇಶವನ್ನು 1681- 1689ರ ನಡುವೆ ಆಳಿದನು. 1689ರ ಮಾರ್ಚ್ ನಲ್ಲಿ 31ರ ಪ್ರಾಯದಲ್ಲಿ ಸಂಭಾಜಿ ಮೃತಪಟ್ಟಿದ್ದರು.
ಹೆಸರಿನ ಸುತ್ತೋಲೆ ಹೊರಡುತ್ತಲೇ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ.

Join Whatsapp
Exit mobile version