Home ಟಾಪ್ ಸುದ್ದಿಗಳು ಮಸೀದಿಯೊಳಗೆ ಅಪವಿತ್ರಕ್ಕೆ ಯತ್ನ: ನಾಲ್ವರು ಸಂಘಪರಿವಾರದ ಕಾರ್ಯಕರ್ತರ ಬಂಧನ

ಮಸೀದಿಯೊಳಗೆ ಅಪವಿತ್ರಕ್ಕೆ ಯತ್ನ: ನಾಲ್ವರು ಸಂಘಪರಿವಾರದ ಕಾರ್ಯಕರ್ತರ ಬಂಧನ

ರಾಂಚಿ: ಜಾರ್ಖಂಡ್ ಗಿರಿದಿಹ್’ನಲ್ಲಿರುವ ಮಸೀದಿಯೊಳಗೆ ಮೂತ್ರ ವಿಸರ್ಜನೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ದುರ್ಗಾಪೂಜೆಯ ಒಂಬತ್ತನೇ ದಿನದ ಶೋಭಾಯಾತ್ರೆಯ ವೇಳೆ ದುಷ್ಕರ್ಮಿಗಳು ಈ ಕುಕೃತ್ಯವೆಸಗಿದ್ದರು.

ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಸನ್ನಿ ರಾಜ್ ಎಂಬಾತ ಜಾರ್ಖಂಡ್’ನ ಖುಟ್ಟಾದಲ್ಲಿರುವ ನಯೀ ಮಸೀದಿಗೆ ಬಂದಿದ್ದು, ಈ ಸಂದರ್ಭದಲ್ಲಿ ಮಸೀದಿಯೊಳಗೆ ಪ್ರಾರ್ಥನೆ ನಡೆಯುತ್ತಿತ್ತು. ಆತ ಪ್ರವಚನ ನೀಡುವಲ್ಲಿಗೆ ತೆರಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈತನ ಈ ಕುಕೃತ್ಯ ಮಸೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಮಸೀದಿಯ ಗೇಟ್’ನ ಹೊರಗಡೆ ಸ್ಕೂಟರ್’ನೊಂದಿಗೆ ಕಾಯುತ್ತಿದ್ದ ರೋಹಿತ್, ದೀಪಾಲೋಕ್ ಮಿತ್ರ ಮತ್ತು ಚಂದನ್ ಗುಪ್ತಾ ಅವರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಸದ್ಯ ಮಸೀದಿ ಕಮಿಟಿಯವರು ನೀಡಿದ ದೂರಿನನ್ವಯ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 109, 153, 153ಎ, 295, 295ಎ, 296, 120ಬಿ ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Join Whatsapp
Exit mobile version