ಪತ್ರಕರ್ತನ ವಿರುದ್ಧ ಅದಾನಿ ಗ್ರೂಪಿನಿಂದ ಮಾನನಷ್ಟ ಮೊಕದ್ದಮೆ: ಬಂಧನ ವಾರಂಟ್

Prasthutha|

ನವದೆಹಲಿ: ಪತ್ರಕರ್ತ ರವಿ ನಾಯರ್ ವಿರುದ್ಧ ಅದಾನಿ ಗ್ರೂಪ್ ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧನ ವಾರಂಟ್ ಜಾರಿಗೊಳಿಸಿದ್ದಾರೆ.

- Advertisement -

ರಫೇಲ್ ಡೀಲ್’ ಹಗರಣದ ಬಗ್ಗೆ ಸುದ್ದಿ ಬಿತ್ತರಿಸಿ ಪ್ರಖ್ಯಾತಿ ಹೊಂದಿದ ರವಿ ನಾಯರ್ ಅವರನ್ನು ಗಾಂಧಿನಗರದ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರವಿ ನಾಯರ್ ಅವರು, ಈ ಸಂಬಂಧ ತನಗೆ ಯಾವುದೇ ಸಮನ್ಸ್ ನೀಡಿಲ್ಲ ಅಥವಾ ದೂರಿನ ಯಾವುದೇ ಪ್ರತಿಯನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಯಾವ ಪೋಸ್ಟ್’ಗೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಪ್ರೇರೇಪಿಸಿದೆ ಎಂದು ನನಗೆ ತಿಳಿಸಲಾಗಿಲ್ಲ ಎಂದು ಅವರು ತಿಳಿಸಿದರು.

Join Whatsapp