ಕಾಂಗ್ರೆಸ್ ಸರಕಾರದಲ್ಲೂ ಮುಸ್ಲಿಮರು ಅಧಿಕೃತವಾಗಿ ಎರಡನೇ ದರ್ಜೆಯ ಪ್ರಜೆಗಳೆ?: ಮುನೀರ್ ಕಾಟಿಪಳ್ಳ

Prasthutha|

ಮಂಗಳೂರು: ಕಾಂಗ್ರೆಸ್ ಸರಕಾರದಲ್ಲೂ ಮುಸ್ಲಿಮರು ಅಧಿಕೃತವಾಗಿ ಎರಡನೇ ದರ್ಜೆಯ ಪ್ರಜೆಗಳೆ ? ಸಿದ್ದರಾಮಯ್ಯನವರಿಗೆ ಏನಾದರು ಕೇಳಿಸುತ್ತಿದೆಯೆ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

- Advertisement -

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಶುಕ್ರವಾರ ಜುಮಾ ನಮಾಜ್ ಸಂದರ್ಭ ಒಳ ರಸ್ತೆಯೊಂದರಲ್ಲಿರುವ ಮಸೀದಿಯಲ್ಲಿ ಜಾಗದ ಕೊರತೆಯಿಂದ ರಸ್ತೆಯ ಬದಿಯಲ್ಲಿ ನಮಾಜು ಮಾಡಿದ ಮುಸ್ಲಿಮರ ಮೇಲೆ ಮಂಗಳೂರು ಪೊಲೀಸರು ಸ್ವಯಂ ಪ್ರೇರಣೆಯಿಂದ FIR ದಾಖಲಿಸಿರುವುದು ದೊಡ್ಡ ಸುದ್ದಿಯಾಗಿದೆ. (ಸರಿ ತಪ್ಪುಗಳು ಬೇರೆಯದ್ದೇ ಚರ್ಚೆ, ಟಿವಿ ಮಾಧ್ಯಮಗಳು ಅರ್ಧ ಸತ್ಯದ ಮೂಲಕ ಮಾಡಿದ ಪ್ರಚೋದನೆಯೂ ಇದರ ಹಿಂದಿದೆ)

ಪೊಲೀಸರಿಗೆ, (ಟಿ ವಿ)ಮಾಧ್ಯಮಗಳಿಗೆ ಸುಲಭದ ತುತ್ತಾಗಿರುವ ಮುಸ್ಲಿಮರ ಮೇಲೆ ಸು ಮಟೊ ಕೇಸ್ ಬುಕ್ ಮಾಡಿರುವ ಮಂಗಳೂರು ಕಮೀಷನರ್ ಅವರಿಗೆ ಮಂಗಳೂರಿನಲ್ಲಿ ತಲೆ ಎತ್ತಿರುವ ಮಸಾಜ್ ಪಾರ್ಲರ್ ಗಳು, ಮಟ್ಕಾ, ಬೆಟ್ಟಿಂಗ್ ಮಾಫಿಯಾಗಳು, ಕದ್ದು ನಡೆಯುವ ಇಸ್ಪೀಟ್ ಅಡ್ಡೆಗಳೂ, ರಾಜಾರೋಷವಾಗಿ ನಡೆಯುವ ಅಕ್ರಮ ಮರಳು ದಂಧೆಗಳು ಯಾಕೆ ಕಾಣುವುದಿಲ್ಲ. ಅದೆಂತಹ ಕುರುಡುತನ ಕಮೀಷನರ್ ಅವರಿಗೆ ಆವರಿಸಿದೆ ? ಮುಸ್ಲಿಮರ ಮೇಲೆ ಸಿ ಸಿ ಕೆಮೆರಾ ಇಟ್ಟು ಕಾಯುವ ಮಾಧ್ಯಮಗಳಿಗೂ ಯಾಕೆ ಇಂತಹ ದಂಧೆಗಳು ಸುದ್ದಿ ಮಾಡಬೇಕು ಅಂತ ಅನಿಸುವುದಿಲ್ಲ.

- Advertisement -

ಅದೆಲ್ಲಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷ, ನಾಯಕರು ಮಂಗಳೂರಿಗೆ ಇಂತಹ ಪೊಲೀಸ್ ಅಧಿಕಾರಿಗಳನ್ನೇ ಎಲ್ಲಿಂದ ಹುಡುಕಿ ತಂದು ಹಾಕುತ್ತಾರೆ ? ಯಾಕೆ ಇಂತಹ ಮನೋಧರ್ಮ ! ಇದನ್ನೆಲ್ಲಾ ಪದೇ ಪದೆ ಹೇಳಿಕೊಳ್ಳಬೇಕೆ, ಕಾಂಗ್ರೆಸ್ ಸರಕಾರದಲ್ಲೂ ಮುಸ್ಲಿಮರು ಅಧಿಕೃತವಾಗಿ ಎರಡನೇ ದರ್ಜೆಯ ಪ್ರಜೆಗಳೆ ? ಸಿದ್ದರಾಮಯ್ಯನವರಿಗೆ ಏನಾದರು ಕೇಳಿಸುತ್ತಿದೆಯೆ ಎಂದು ಹೇಳಿದ್ದಾರೆ.



Join Whatsapp
Exit mobile version