ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ‘ವೈ’ ಶ್ರೇಣಿ ಭದ್ರತೆ !

Prasthutha|

ಚೆನ್ನೈ; ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈಗೆ ಗೃಹ ಸಚಿವಾಲಯವು ‘ವೈ’ ಕೆಟಗರಿ ಭದ್ರತೆಯನ್ನು ನೀಡಿದೆ. ಅಣ್ಣಾಮಲೈಗೆ ನೀಡಿರುವ ಹೊಸ ಭದ್ರತೆಯು ರಾಜ್ಯ ಪೊಲೀಸರು ಒದಗಿಸುವ ಭದ್ರತೆಗಿಂತ ಹೆಚ್ಚಿನದಾಗಿರುತ್ತದೆ.

- Advertisement -

ಕಳೆದ ಕೆಲವು ವಾರಗಳ ಹಿಂದೆ ಅಣ್ಣಾಮಲೈ ಅವರಿಗೆ ಬರುತ್ತಿರುವ ಬೆದರಿಕೆ ಕರೆಗಳನ್ನು ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸಿದ್ದು, ಈ ವರದಿಯ ಮೇರೆಗೆ ಅಣ್ಣಾಮಲೈಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

Join Whatsapp
Exit mobile version