ಅನಂತಕುಮಾರ್ ಹೆಗಡೆ ಕ್ಷೇತ್ರದ ಮತದಾರನಿಗೆ ದ್ರೋಹವೆಸಗಿದ್ದಾರೆ: ಮಧು ಬಂಗಾರಪ್ಪ

Prasthutha|

ಕಾರವಾರ: ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಕ್ಷೇತ್ರದ ಮತದಾರನಿಗೆ ದ್ರೋಹವೆಸಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ಕಾಲ ಅನಂತಕುಮಾರ್ ಹೆಗಡೆ ಯನ್ನು ಸಂಸತ್ತಿಗೆ ಆರಿಸಿ ಕಳಿಸಿದ ಮತದಾರರನ್ನು ಮರೆತು ಅವರಿಗೆ ದ್ರೋಹ ಬಗೆದಿದ್ದರು, ಈಗ ಚುನಾವಣೆ ಹತ್ತಿರ ಬಂದಿರುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.


ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನಂತಕುಮಾರ ಹೆಗಡೆ ಅವಮಾನ ಮಾಡಿದ್ದಾರೆ, ಎಲ್ಲ ಧರ್ಮ, ಜಾತಿ ಮತ್ತು ವರ್ಗದ ಜನ ಒಟ್ಟಾಗಿ ಬಾಳುವ ಅವಕಾಶ ಕಲ್ಪಿಸುವ ಡಾ ಬಿಅರ್ ಅಂಬೇಡ್ಕರ್ ಪರಿಕಲ್ಪನೆಯ ಪ್ರಜಾಪ್ರಭುತ್ವದ ಬಗ್ಗೆ ಅವರಿಗೆ ವಿರೋಧವಿದೆ. ಬಿಜೆಪಿ ವರಿಷ್ಠರು ಹೆಗಡೆಯವರಿಗೇ ಟಿಕೆಟ್ ಕೊಡಲಿ ಅಂತ ನಾವು ಆಶಿಸುತ್ತೇವೆ, ಈ ಬಾರಿ ಅವರ ಕ್ಷೇತ್ರದಲ್ಲೇ ಅವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಹೇಳುತ್ತೇವೆ ಎಂದು ಬಂಗಾರಪ್ಪ ಹೇಳಿದರು.

Join Whatsapp
Exit mobile version