ಗರ್ಭಿಣಿಯ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಆರೋಪ: ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ

Prasthutha|

ರಾಂಚಿ: ಹಜಾರಿಬಾಗ್ ನಲ್ಲಿ ಮಹೀಂದ್ರಾ ಲೋನ್ ರಿಕವರಿ ಏಜೆಂಟ್ ಓರ್ವ ಟ್ರ್ಯಾಕ್ಟರ್ ಹರಿಸಿ ಗರ್ಭಿಣಿಯೊಬ್ಬರ ಸಾವಿಗೆ ಕಾರಣವಾಗಿದ್ದಾನೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಕೊನೆಗೂ  ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಹಜಾರಿಬಾಗ್ ಘಟನೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ವಿಚಲಿತರಾಗಿದ್ದೇವೆ ಎಂದಿದ್ದಾರೆ. ಮಾನವ ದುರಂತವೊಂದು ಸಂಭವಿಸಿದೆ. ನಾವು ಈ ಘಟನೆಯನ್ನು ಎಲ್ಲಾ ಅಂಶಗಳಿಂದ ತನಿಖೆ ಮಾಡುತ್ತೇವೆ. ತನಿಖೆಯ ಸಮಯದಲ್ಲಿ ನಾವು ಅಧಿಕಾರಿಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಈ ದುಃಖದ ಕ್ಷಣದಲ್ಲಿ ನಾವು ಸಂತ್ರಸ್ತ ಕುಟುಂಬದೊಂದಿಗೆ ನಿಲ್ಲುತ್ತೇವೆ ಎಂದು ಮಹೀಂದ್ರಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನೀಶ್ ಶಾ ಪ್ರಕಟಣೆ ಹೊರಡಿಸಿದ್ದಾರೆ.

ಇತ್ತೀಚಿಗೆ  ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ , ಮಹೀಂದ್ರಾ ಫೈನಾನ್ಸ್ನಿಂದ 1.3 ಲಕ್ಷ ರೂಪಾಯಿ ಲೋನ್ ಬಾಕಿ ಉಳಿಸಿಕೊಂಡಿದ್ದಕ್ಕೆ , ಲೋನ್ ರಿಕವರಿ ಏಜೆಂಟ್ ಕುಟುಂಬದ ಟ್ರ್ಯಾಕ್ಟರ್ ಅನ್ನು ಮುಟ್ಟುಗೋಲು ಹಾಕೊಂಡಿದ್ದರ ವಿರುದ್ಧ ರೈತನ 27 ವರ್ಷದ ಗರ್ಭಿಣಿ ಮಗಳು  ಪ್ರತಿಭಟಿಸುವಾಗ ಟ್ರ್ಯಾಕ್ಟರ್ ಹರಿದು ದುರಂತವಾಗಿ ಸಾವಿಗೀಡಾಗಿದ್ದಳು.

- Advertisement -

ಉದ್ದೇಶಪೂರ್ವಕವಾಗಿಯೇ ಟ್ರ್ಯಾಕ್ಟರ್ ಹರಿಸಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.  ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ಕಂಪನಿ ತ ಹೇಳಿಕೆ ಬಿಡುಗಡೆ ಮಾಡಿದೆ.

Join Whatsapp