Home ಕರಾವಳಿ ಮಂಜೇಶ್ವರ SDPI ಯ ಕೋವಿಡ್-19 ಆಂಬುಲೆನ್ಸ್ ನಾಡಿಗೆ ಸಮರ್ಪಣೆ | ಸೇವಾ ರಂಗಕ್ಕೆ...

ಮಂಜೇಶ್ವರ SDPI ಯ ಕೋವಿಡ್-19 ಆಂಬುಲೆನ್ಸ್ ನಾಡಿಗೆ ಸಮರ್ಪಣೆ | ಸೇವಾ ರಂಗಕ್ಕೆ ಮತ್ತೊಂದು ಕೊಡುಗೆ

ಮಂಜೇಶ್ವರ: ಕೋವಿಡ್ -19 ತನ್ನ ಉತ್ತುಂಗದಲ್ಲಿರುವ ಅತ್ಯಂತ ಸಂದಿಗ್ಧ ಘಟ್ಟದಲ್ಲಿ, ನಾಡಿನ ಜನತೆಗೆ ತನ್ನ ಸೇವೆಯ ಪರಿಧಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲಂ ಸಮಿತಿ ವತಿಯಿಂದ SDPI – ಕೋವಿಡ್ 19 ಆಂಬುಲೆನ್ಸನ್ನು ನಾಡಿಗೆ ಸಮರ್ಪಿಸಲಾಯಿತು.

ಈ ಕಾರ್ಯಕ್ಕೆ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ ಚಾಲನೆ ನೀಡಿದರು. ಮಂಜೇಶ್ವರ ಮಂಡಲಂ ಸಮಿತಿ ಕಾರ್ಯಧರ್ಶಿ ಮುಬಾರಕ್ ಕಡಂಬಾರ್,  ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಡಾಜೆ, ಜನಪ್ರತಿನಿಧಿಗಳಾದ ರೈಶು ಮಂಜೇಶ್ವರ, ಕುಲ್ಸುಮ್ಮ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಜೇಶ್ವರ ಡಿವಿಷನ್ ಆಧ್ಯಕ್ಷರಾದ ಶಬೀರ್ ಪೊಸೋಟ್ ಅವರು ಈ ವೇಳೆ ಉಪಸ್ಥಿತರಿದ್ದರು.

Join Whatsapp
Exit mobile version