ರೈತರ ಹೋರಾಟ | ಹರ್ಯಾಣ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್ ಪಡೆದ ಸ್ವತಂತ್ರ ಶಾಸಕ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ನಡುವೆ, ಬಿಜೆಪಿ ನೇತೃತ್ವದ ಎನ್ ಡಿಎ ಮಿತ್ರರಲ್ಲೇ ಒಡಕುಂಟಾಗಿದೆ. ಹರ್ಯಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಸ್ವತಂತ್ರ ಶಾಸಕರೊಬ್ಬರು, ವಿಷಯ ಬೇಗ ಇತ್ಯರ್ಥವಾಗದಿದ್ದಲ್ಲಿ, ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿದ್ದಾರೆ. ಅಲ್ಲದೆ, ಜೆಜೆಪಿ ನಾಯಕ ಅಜಯ್ ಚೌಟಾಲ, ರೈತರ ವಿಷಯ ಬೇಗ ಬಗೆಹರಿಸುವಂತೆ ಒತ್ತಡ ಹೇರಿದ್ದಾರೆ.

- Advertisement -

ಸ್ವತಂತ್ರ ಅಭ್ಯರ್ಥಿ ಸೋಮ್ ಬೀರ್ ಸಂಗ್ವಾನ್ ಹರ್ಯಾಣ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ. ನಿನ್ನೆಯಷ್ಟೇ ಅವರು ಲೈವ್ ಸ್ಟಾಕ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ರೈತರ ವಿರುದ್ಧ ಇರುವ ಮತ್ತು ರೈತರ ಮೇಲೆ ದೌರ್ಜನ್ಯ ನಡೆಸುವ ಸರಕಾರಕ್ಕೆ ನಾವು ಬೆಂಬಲಿಸಲು ಸಾಧ್ಯವಿಲ್ಲ ಎಂದು ಸೋಮ್ ಬೀರ್ ಸ್ಪೀಕರ್ ಗೆ ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

ರೈತರ ಹೋರಾಟದ ವಿಷಯದಲ್ಲಿ ಬಿಜೆಪಿ ಬೆಂಬಲಿಗರು ತೋರುತ್ತಿರುವ ಉದ್ಧಟತನ, ಸರಕಾರದ ನಿರ್ಲಕ್ಷ್ಯಕ್ಕೆ ಮಿತ್ರ ಪಕ್ಷಗಳಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಜನನಾಯಕ ಜನಹಿತ್ ಪಾರ್ಟಿ (ಜೆಜೆಪಿ), ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿವೆ.

Join Whatsapp