Home ಟಾಪ್ ಸುದ್ದಿಗಳು ರಾಜ್ಯ ಬಿಜೆಪಿಯ ಅಡ್ಜಸ್ಟ್‌ಮೆಂಟ್‌ ಎಲ್ಲ ವರಿಷ್ಠರಿಗೆ ಹೇಳಿದ್ದೇನೆ: ಯತ್ನಾಳ್

ರಾಜ್ಯ ಬಿಜೆಪಿಯ ಅಡ್ಜಸ್ಟ್‌ಮೆಂಟ್‌ ಎಲ್ಲ ವರಿಷ್ಠರಿಗೆ ಹೇಳಿದ್ದೇನೆ: ಯತ್ನಾಳ್

ವಿಜಯಪುರ: ಹೈಕಮಾಂಡ್ ಭೇಟಿ ಮಾಡಿದ ಶಾಸಕ ಬಸನ ಗೌಡ ಪಾಟೀಲ ಯತ್ನಾಳ್, ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಫಲಪ್ರದವಾಗಿದ್ದು, ಇಲ್ಲಿನ ಅಡ್ಜೆಸ್ಟ್‌ಮೆಂಟ್ ರಾಜಕಾರಣದ ಬಗ್ಗೆ ಸುದೀರ್ಘವಾಗಿ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ನನ್ನನ್ನು ತರಾಟೆಗೆ ತೆಗೆದುಕೊಂಡಿದೆ ಎಂಬುದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಇಲ್ಲಿನ ವಿದ್ಯಮಾನ ವಿವರಿಸಿದ್ದೇನೆ. ಸುದೀರ್ಘ 25 ನಿಮಿಷಗಳ ಕಾಲ ರಾಜ್ಯ ಬಿಜೆಪಿಯ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮುಂತಾದ ಪ್ರಹಸನಗಳನ್ನು ವಿವರಿಸಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.

Join Whatsapp
Exit mobile version