Home ಟಾಪ್ ಸುದ್ದಿಗಳು ನಾಥೂರಾಮ್ ಗೋಡ್ಸೆ ಓರ್ವ ಹೇಡಿ, ಭಯೋತ್ಪಾದಕ, ಕೊಲೆಗಾರ : ನಟ ಸಿದ್ಧಾರ್ಥ

ನಾಥೂರಾಮ್ ಗೋಡ್ಸೆ ಓರ್ವ ಹೇಡಿ, ಭಯೋತ್ಪಾದಕ, ಕೊಲೆಗಾರ : ನಟ ಸಿದ್ಧಾರ್ಥ

ಹೈದರಾಬಾದ್ : ಮಹಾತ್ಮ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆಗೈದು ಇಂದಿಗೆ 73 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನಾಥೂರಾಮ್ ಗೋಡ್ಸೆಯನ್ನೇ ಸಮರ್ಥಿಸಿಕೊಂಡು, ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದರೆ, ಇನ್ನೊಂದೆಡೆಯಿಂದ ಇದಕ್ಕೆ ದೊಡ್ಡ ಆಕ್ಷೇಪವೂ ವ್ಯಕ್ತವಾಗುತ್ತಿದೆ.

ಈ ನಡುವೆ, ಬಹುಭಾಷಾ ನಟ ಸಿದ್ಧಾರ್ಥ ಟ್ವೀಟ್ ಮಾಡಿ, “ನಾಥೂರಾಮ್ ಗೋಡ್ಸೆ ಓರ್ವ ಹೇಡಿ, ಭಯೋತ್ಪಾದಕ, ಕೊಲೆಗಾರ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ನಾಥೂರಾಮ್ ಗೋಡ್ಸೆ ಓರ್ವ ಹೇಡಿ, ಭಯೋತ್ಪಾದಕ, ವಿಫಲ ಆರೆಸ್ಸೆಸ್ ನವ ಮತ್ತು ಓರ್ವ ಕೊಲೆಗಾರ. ಗೋಡ್ಸೆಯ ನೆನಪು ಮತ್ತು ಆತನ ಹೆಸರು ಭಾರತೀಯರು ತೀವ್ರ ನಾಚಿಕೆಪಡುವಂತದ್ದು. ಗಾಂಧೀಜಿ ಅಮರ್ ರಹೇ” ಎಂದು ಸಿದ್ಧಾರ್ಥ ಟ್ವೀಟ್ ಮಾಡಿದ್ದಾರೆ.

ಇಂದು ಗಾಂಧೀಜಿ ಮತ್ತು ನಾಥೂರಾಮ್ ಗೋಡ್ಸೆ ಇಬ್ಬರ ಹೆಸರೂ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು.

Join Whatsapp
Exit mobile version