Home ಟಾಪ್ ಸುದ್ದಿಗಳು ನಟ ಅಂಬರೀಷ್ 4ನೇ ಪುಣ್ಯಸ್ಮರಣೆ: ‘ಅಂಬಿ ಅಮರ’ ಎಂದು ಸಂಸದೆ ಸುಮಲತಾ ಟ್ವೀಟ್

ನಟ ಅಂಬರೀಷ್ 4ನೇ ಪುಣ್ಯಸ್ಮರಣೆ: ‘ಅಂಬಿ ಅಮರ’ ಎಂದು ಸಂಸದೆ ಸುಮಲತಾ ಟ್ವೀಟ್

ಬೆಂಗಳೂರು: ನಟ ಅಂಬರೀಷ್ ನಿಧನರಾಗಿ ಇಂದಿಗೆ 4 ವರ್ಷಗಳು ಕಳೆದಿದ್ದು, ಅಂಬರೀಷ್ ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಭಾವನಾತ್ಮಕ ಸಂದೇಶ ಹಾಕಿ ಪತಿಯನ್ನು ಸ್ಮರಿಸಿದ್ದಾರೆ.
ನೀವು ಎಂದೆಂದಿಗೂ ಜೀವಂತ, ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ ಎಂದಿದ್ದಾರೆ. ‘ಅಂಬಿ ಅಮರ’ ಎಂದು ಟ್ವಿಟ್ ಮಾಡಿದ್ದಾರೆ.

ನಟ ಅಂಬರೀಷ್ ಅಭಿಮಾನಿಗಳು, ಆಪ್ತರು ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್ ಅವರ ಸಮಾಧಿಗೆ ತೆರಳಿ ನೆಚ್ಚಿನ ಅಂಬಿ ಅವರನ್ನು ಸ್ಮರಿಸುತ್ತಿದ್ದಾರೆ.
ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂದು ಕರೆಸಿಕೊಂಡಿದ್ದ ಅಂಬರೀಷ್ ರಾಜಕಾರಣದಲ್ಲೂ ಸಕ್ರಿಯರಾಗಿದ್ದರು. 24 ನವೆಂಬರ್ 2018 ರಂದು ಬೆಂಗಳೂರಿನಲ್ಲಿ ಹೃದಯ ಸಮಸ್ಯೆಯಿಂದ ನಿಧನರಾಗಿದ್ದರು.

Join Whatsapp
Exit mobile version