Home ಟಾಪ್ ಸುದ್ದಿಗಳು ಚರ್ಚ್’ಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರು ಪಾದ್ರಿ ಸೇರಿ ಕ್ರಿಶ್ಚಿಯನ್ನರಿಗೆ ಹಲ್ಲೆ: 9 ಮಂದಿ ಆಸ್ಪತ್ರೆಗೆ ದಾಖಲು

ಚರ್ಚ್’ಗೆ ನುಗ್ಗಿ ಸಂಘಪರಿವಾರದ ಕಾರ್ಯಕರ್ತರು ಪಾದ್ರಿ ಸೇರಿ ಕ್ರಿಶ್ಚಿಯನ್ನರಿಗೆ ಹಲ್ಲೆ: 9 ಮಂದಿ ಆಸ್ಪತ್ರೆಗೆ ದಾಖಲು

ರಾಯ್’ಘಡ್: ಛತ್ತೀಸ್’ಗಢದಲ್ಲಿ ಹೊಸದಾಗಿ ನಿರ್ಮಿಸಲಾದ ಚರ್ಚ್ ಹಾಲ್’ಗೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು ಅಲ್ಲಿದ್ದ ಪಾದ್ರಿ ಸೇರಿದಂತೆ ಪ್ರಾರ್ಥನೆ ಸಲ್ಲಿಸಲು ಬಂದವರಿಗೆ ಹಲ್ಲೆ ನಡೆಸಿದ ಪರಿಣಾಮ 9 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರಿಶ್ಚಿಯನ್ನರು ಚರ್ಚ್’ನಲ್ಲಿ ಪ್ರಾರ್ಥನೆ ನಿರತರಾಗಿದ್ದಾಗ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ಅಲ್ಲಿಗೆ ನುಗ್ಗಿ ದಾಂಧಲೆ ಆರಂಭಿಸಿದೆ.

ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಿರುವ 11 ರಾಜ್ಯಗಳಲ್ಲಿ ಒಂದಾದ ಛತ್ತೀಸ್’ಗಢದಲ್ಲಿ ಕ್ರಿಶ್ಚಿಯನ್ನರ ಮೇಲೆ ನಿರಂತರ ಕಿರುಕುಳ ಮತ್ತು ದೌರ್ಜನ್ಯ ವ್ಯಾಪಕವಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.

Join Whatsapp
Exit mobile version