Home ಟಾಪ್ ಸುದ್ದಿಗಳು ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಸರ್ಕಾರಿ ಕೆಲಸ; ಸಿಎಂ ಬೊಮ್ಮಯಿ ಭರವಸೆ

ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಸರ್ಕಾರಿ ಕೆಲಸ; ಸಿಎಂ ಬೊಮ್ಮಯಿ ಭರವಸೆ

ಬೆಂಗಳೂರು: ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಸರ್ಕಾರಿ ಕೆಲಸ  ಹಾಗೂ  ಫ್ಲ್ಯಾ ಟ್ ನೀಡಲು ಸಿಎಂ ಬೊಮ್ಮಯಿ ಭರವಸೆ ನೀಡಿದ್ದಾರೆ.

ಮಂಗಳವಾರ ಆ್ಯಸಿಡ್ ದಾಳಿಗೊಳಗಾದ ಯುವತಿ  ಆರ್ ಟಿ ನಗರ ಸಿಎಂ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಯಿ ಅವರನ್ನು ಭೇಟಿ, ಸರಕಾರದ ಭರವಸೆಯಂತೆ ಸರ್ಕಾರಿ ಕೆಲಸದ ಜೊತೆಗೆ  ಒಂದು ನಿವಾಸ ನೀಡುವಂತೆಯೂ ಮನವಿ ಮಾಡಿದ್ದರು. 

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಆಕೆ ಒಂದು ಮನೆ ನಿರ್ಮಿಸಿ ಕೊಡುವಂತೆಯೂ  ಬೇಡಿಕೆ ಸಲ್ಲಿಸಿದ್ದು, ವಸತಿ ಸಚಿವರ ಬಳಿ ಮಾತನಾಡಿ, ಈ ಭಾಗದಲ್ಲಿ ಬಡವರಿಗಾಗಿ ನಿರ್ಮಿಸಲಾಗುತ್ತಿರುವ 40 ಸಾವಿರ ಫ್ಲ್ಯಾಟ್ ಗಳಲ್ಲಿ ಒಂದು ಫ್ಲ್ಯಾಟ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೆ, ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಮಾಸಾಶನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.

Join Whatsapp
Exit mobile version