ನಕ್ಸಲರಿಂದ ಅಪಹರಣಗೊಂಡಿದ್ದ CRPF ಯೋಧನ ಬಿಡುಗಡೆ

Prasthutha|

ಛತ್ತೀಸ್ಗಢದಲ್ಲಿ ನಕ್ಸಲರಿಂದ ಅಪಹರನಗೊಂಡಿದ್ದ ಕೋಬ್ರಾ ಪಡೆಯ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಎ ಎನ್ ಐ ವರದಿ ಮಾಡಿದೆ.  ಇತ್ತಿಚೆಗೆ ರಾಜ್ಯದ ಬಿಜಾಪುರ ಎಂಬಲ್ಲಿ ಹೊಂಚು ದಾಳಿ ನಡೆಸಿದ್ದ ನಕ್ಸಲರು 22 ಮಂದಿ ಯೋಧರನ್ನು ಹತ್ಯೆಗೈದಿದ್ದರು. ಘರ್ಷನೆಯ ನಂತರ ಒಬ್ಬ ಯೋಧ ಕಾಣೆಯಾಗಿದ್ದ. ಆ ಬಳಿಕ ನಕ್ಸಲರು ಸಂದೇಶ ಹರಿಯಬಿಟ್ಟು ಕಾಣೆಯಾಗಿರುವ ರಾಕೇಶ್ವರ್ ಸಿಂಗ್ ನಮ್ಮ ಬಳಿ ಇದ್ದಾರೆ ಎಂದು ತಿಳಿಸಿದ್ದರು. ಬಿಡುಗಡೆಗಾಗಿ ಮಧ್ಯವರ್ತಿಯನ್ನು ನೇಮಿಸುವಂತೆ ಅವರು ಆಗ್ರಹಿಸಿದ್ದರು.

- Advertisement -

ಇದೀಗ ಅಪಹರಣಗೊಂಡ 4 ದಿನಗಳ ಬಳಿಕ ನಕ್ಸಲರು ಅವರನ್ನು ಬಿಡುಗಡೆಗೊಳಿಸಿದ್ದಾರೆ. ಅವರನ್ನು ಈಗ CRRF ಕ್ಯಾಂಪಿಗೆ ಕರೆದುಕೊಂಡು ಬರಲಾಗಿದೆ ಎಂದು ವರದಿಗಳಿ ತಿಳಿಸಿದೆ.

Join Whatsapp