Home ಟಾಪ್ ಸುದ್ದಿಗಳು ಕಳ್ಳತನಕ್ಕೆ ಬಂದು ಮೂರ್ತಿಗೆ ನಮಿಸಿ ಬರಿಗೈಲಿ ಹೊರಹೋದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

ಕಳ್ಳತನಕ್ಕೆ ಬಂದು ಮೂರ್ತಿಗೆ ನಮಿಸಿ ಬರಿಗೈಲಿ ಹೊರಹೋದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ದೇವಸ್ಥಾನದಲ್ಲಿರುವ ಮೂರ್ತಿಯ ಮೈಮೇಲಿನ ಚಿನ್ನಾಭರಣವನ್ನು ಕದಿಯಲು ಬಂದಿದ್ದ ಕಳ್ಳನೋರ್ವ ದೇವರಿಗೆ ನಮಿಸಿ ಬರಿಗೈಯಲ್ಲಿ ಹೊರ ಹೋಗಿರುವ ಘಟನೆ ತಾವರೆಕೆರೆಯ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ  ನಡೆದಿದೆ.

ಸುಬ್ರಹ್ಮಣ್ಯಸ್ವಾಮಿ  ದೇವಸ್ಥಾನದ ಬೀಗ ಹೊಡೆದು ಒಳಗೆ ನುಗ್ಗಿದ  ಕಳ್ಳ ಅರೆಬೆತ್ತಲಾಗಿ ಇಡೀ ದೇವಸ್ಥಾನದ ತುಂಬೆಲ್ಲಾ ಅಡ್ಡಾಡಿದ್ದಾನೆ.

ನಂತರ ಗರ್ಭಗುಡಿಯ ಬಾಗಿಲು ತೆರೆದು ಒಳಗೆ ಹೋಗಿದ್ದಾನೆ.  ಕೆಲ ಕಾಲ ಗರ್ಭಗುಡಿಯಲ್ಲೇ ಇದ್ದು ಮೂರ್ತಿಗೆ ನಮಸ್ಕರಿಸಿ ಅಲ್ಲಿದ್ದ ಚಿನ್ನಭರಣ, ನಗದು ತೆಗೆದುಕೊಳ್ಳದೆ ನೇರವಾಗಿ ಹೊರಬಂದಿದ್ದಾನೆ.

ದೇವಸ್ಥಾನದಲ್ಲಿ ಕಳ್ಳನ ಓಡಾಟ, ಗರ್ಭಗುಡಿಗೆ ಪ್ರವೇಶಿಸಿದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ನೋಡಿದ ದೇವಸ್ಥಾನದ ಆಡಳಿತ ಮಂಡಳಿ ತಾವರೆಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

Join Whatsapp
Exit mobile version