ಗೋಣಿಕೊಪ್ಪ | ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ವಿದ್ಯಾರ್ಥಿನಿ

Prasthutha|

ಗೋಣಿಕೊಪ್ಪ : ಇಲ್ಲಿನ ಸೀಗೆತೋಡು ಬಳಿ ವ್ಯಕ್ತಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು , ಮುಳುಗುತ್ತಿದ್ದ ವ್ಯಕ್ತಿಯನ್ನು ವಿದ್ಯಾರ್ಥಿನಿಯೊಬ್ಬಳು ರಕ್ಷಿಸಿದ್ದಾಳೆ. ವಿದ್ಯಾರ್ಥಿನಿ ಈ ಸಾಹಸ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

- Advertisement -

ಸರ್ವೋದಯ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸೀಗೆತೋಡು ನಿವಾಸಿ ನಮೃತ ಎಸ್ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಮನೆಯ ಪಕ್ಕದಲ್ಲಿರುವ ಕೆರೆಯಲ್ಲಿ ಒಬ್ಬ ವ್ಯಕ್ತಿ ಮುಳುಗುತ್ತಿದ್ದನ್ನು ಕಂಡು ತಕ್ಷಣವೇ ನೀರಿಗೆ ಜಿಗಿದಿದ್ದಾಳೆ. ಮುಳುಗುತ್ತಿದ್ದ ವ್ಯಕ್ತಿಯ ಕಾಲರ್ ಹಿಡಿದು ವಿದ್ಯಾರ್ಥಿನಿ ರಕ್ಷಿಸಿದ್ದು ನನಗೆ ನನ್ನ ಕಾಲೇಜಿನಲ್ಲಿ ಕಲಿಸಿದ ಮೋರಲ್ ತರಬೇತಿಯೇ ಈ ಸಾಹಸಕ್ಕೆ ಸ್ಪೂರ್ತಿ ಎಂದಿದ್ದಾಳೆ.

Join Whatsapp