ಉ.ಪ್ರ: ಕೊಳೆಗೇರಿವಾಸಿಗಳ ಮೇಲೆ ಹಿಂದೂ ರಕ್ಷಣಾ ದಳದವರಿಂದ ದಾಳಿ: ಗುಡಿಸಲು, ವಸ್ತುಗಳಿಗೆ ಬೆಂಕಿ

Prasthutha|

ಘಾಜಿಯಾಬಾದ್‌: ಇಲ್ಲಿಯ ಕೊಳೆಗೇರಿಗಳಲ್ಲಿ ವಾಸಿಸುವ ಬಡಪಾಯಿ ಜನರ ಮೇಲೆ ಹಿಂದೂ ರಕ್ಷಾ ದಳದ ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸಿದ ಘಟನೆ ನಡೆದಿದೆ. ಅವರನ್ನು ದೊಣ್ಣೆಗಳಿಂದ ಹೊಡೆದು, ಅವರ ಗುಡಿಸಲುಗಳನ್ನು ನಾಶಪಡಿಸಿದ್ದಲ್ಲದೇ, ಅವರ ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ.

- Advertisement -

ಕೊಳೆಗೇರಿಗಳಲ್ಲಿ ವಾಸಿಸುವ‌ ಉತ್ತರ ಪ್ರದೇಶದ ಶಹಜಹಾನ್‌ಪುರದವರ ಮೇಲೆ ಈ ದಾಳಿ‌ನಡೆಸಲಾಗಿದೆ. ಅವರನ್ನು ಬಾಂಗ್ಲಾದೇಶೀಯರು ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ.

ಹಿಂದೂ ರಕ್ಷಣಾ ದಳದ ರಾಷ್ಟ್ರೀಯ ಅಧ್ಯಕ್ಷ ಭೂಪೇಂದ್ರ ಚೌಧರಿ ಎಂದು ಕರೆಯಲ್ಪಡುವ ಪಿಂಕಿ ಚೌಧರಿ ಮತ್ತು 15-20 ಅಪರಿಚಿತ ವ್ಯಕ್ತಿಗಳ ವಿರುದ್ಧ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್‌ ಪೆಕ್ಟರ್ ಸಂಜೀವ್ ಕುಮಾರ್ ಘಟನೆ ಸಂಬಂಧವಾಗಿ ಪ್ರತಿಕ್ರಿಯಿಸಿದ್ದಾರೆ.

- Advertisement -

ಎಫ್‌ಐಆರ್‌ನ ಪ್ರಕಾರ ಚೌಧರಿ ಮತ್ತು ಅವರ ಸಹಚರರು ಕೊಳೆಗೇರಿ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾರೆ, ಅವರ ಆಸ್ತಿಯನ್ನು ನಾಶಪಡಿಸಿದ್ದಾರೆ ಮತ್ತು ನಿವಾಸಿಗಳು ಬಾಂಗ್ಲಾದೇಶದವರಲ್ಲ ಎಂಬ ಪೊಲೀಸರು ಹೇಳಿದರೂ ಕೇಳದೇ ಕೃತ್ಯವೆಸಗಿದ್ದಾರೆ.



Join Whatsapp
Exit mobile version