Home ಟಾಪ್ ಸುದ್ದಿಗಳು ಮುಸ್ಲಿಮ್ ವ್ಯಕ್ತಿಯ ಜ್ಯೂಸ್ ಅಂಗಡಿ ಬಂದ್ ಮಾಡಿದ ಸಂಘಪರಿವಾರ

ಮುಸ್ಲಿಮ್ ವ್ಯಕ್ತಿಯ ಜ್ಯೂಸ್ ಅಂಗಡಿ ಬಂದ್ ಮಾಡಿದ ಸಂಘಪರಿವಾರ

ಲಕ್ನೋ: ಲವ್ ಜಿಹಾದ್ ಗೆ ಉತ್ತೇಜಿಸುತ್ತಿದ್ದಾನೆ ಎಂದು ಆರೋಪಿಸಿ ಹಿಂದುತ್ವ ಗೂಂಡಾಗಳು ಮುಸ್ಲಿಮ್ ವ್ಯಕ್ತಿ ನಡೆಸುತ್ತಿದ್ದ ಜ್ಯೂಸ್ ಮಾರಾಟದ ಅಂಗಡಿಯನ್ನು ಬಲವಂತವಾಗಿ ಮುಚ್ಚಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಉತ್ತರ ಪ್ರದೇಶದ ಮೊರಾದಾಬಾದ್ ನ ಬುಧಿ ವಿಹಾರ್ ಪ್ರದೇಶದಲ್ಲಿ ಅಂಗಡಿ ನಡೆಸುತ್ತಿದ್ದ ಶಾಬು ಅವರ ಅಂಗಡಿಯ ಮುಂಭಾಗ ಬಜರಂಗದಳದ ಪುಂಡರು ಜಮಾಯಿಸಿ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿ ಅಂಗಡಿ ಬಂದ್ ಮಾಡಿದರು.ಬಜರಂಗದಳದ ಕಾರ್ಯಕರ್ತರು ಬಲವಂತವಾಗಿ ಅಂಗಡಿಯ ಶಟರ್ ಮುಚ್ಚಿ ಒಂದು ಗಂಟೆ ಘೋಷಣೆಗಳನ್ನು ಕೂಗಿದರು.

ಈ ಪ್ರದೇಶದಲ್ಲಿ ಶಾಬು, ಲವ್ ಜಿಹಾದ್ ಉತ್ತೇಜಿಸುತ್ತಿದ್ದಾನೆ ಎಂದು ಬಜರಂಗದಳದ ಸದಸ್ಯರು ಆರೋಪಿಸಿದರು. “ಆ ವ್ಯಕ್ತಿ ನಿಜವಾಗಿಯೂ ಜ್ಯೂಸ್ ಸೆಂಟರ್ ಸೋಗಿನಲ್ಲಿ ಹಿಂದೂ ಪ್ರದೇಶಗಳಲ್ಲಿ ಲವ್ ಜಿಹಾದ್ ನಡೆಸುತ್ತಿದ್ದಾನೆ” ಎಂದು ಅವರು ಆರೋಪಿಸಿದರು.

ಹಿಂದೂ ಬಾಹುಳ್ಯದ ಪ್ರದೇಶಗಳಲ್ಲಿ ಜ್ಯೂಸ್ ಅಂಗಡಿ ನಡೆಸಂದತೆ ಬಜರಂಗದಳದ ಸದಸ್ಯರು ಯುವಕನಿಗೆ ಬೆದರಿಕೆ ಹಾಕಿದ್ದಾರೆ. ಅಂಗಡಿ ಬಂದ್ ಮಾಡದಿದ್ದರೆ ಅದನ್ನು ಬಂದ್ ಮಾಡಲು ಅಭಿಯಾನ ಆರಂಭಿಸುವುದಾಗಿ ಅವರು ಬೆದರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version